- Advertisement -
- Advertisement -
ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ಶ್ರೀ ಕೃಷ್ಣ ಯುವಕ ಮಂಡಲ (ರಿ)ಸಿಟಿಗುಡ್ಡೆ ವತಿಯಿಂದ “ಭವತಿ ಭಿಕ್ಷಾಂದೇಹಿ” ಎಂಬ ಸೇವಾ ಯೋಜನೆಯಡಿ ಹಣವನ್ನು ಸಂಗ್ರಹಿಸಲಾಯಿತು.
ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಮಾಲತಿ ರವರ ನಾಲ್ಕು ಹೆಣ್ಣು ಮಕ್ಕಳಲ್ಲಿ ಮೂರನೇ ಮಗಳು ಸುಹಾಸಿನಿ ಫ್ಯಾಂಕ್ರೆಸ್ ಕಾಯಿಲೆಯಿಂದ ಬಳಲುತ್ತಿದ್ದು ಇವರ ಶಸ್ತ್ರ ಚಿಕಿತ್ಸೆಗಾಗಿ ಸಂಗ್ರಹಿಸಿದ ಮೊತ್ತವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಯುವಕ ಮಂಡಲ (ರಿ)ಸಿಟಿಗುಡ್ಡೆ ಇದರ ಅಧ್ಯಕ್ಷ ಸ್ನೇಹ ಸಿಲ್ಕ್ ಅಂಡ್ ರೆಡಿಮೇಡ್ ಸೆಂಟರ್ ಬೊಳುವಾರು ಇದರ ಉದ್ಯೋಗಿ ಬಿ ರಾಜೀವ.ಗೌಡ ಮತ್ತು ಜೆ.ಪಿ.ಸಂತೋಷ್ ಮುರ, ರಕ್ತದಾನಿ ನವೀನ್ ( ಸಿಟಿಗುಡ್ಡೆ) ಪುತ್ತೂರು ಉಪಸ್ಥಿತರಿದ್ದರು.
- Advertisement -