Tuesday, May 7, 2024
spot_imgspot_img
spot_imgspot_img

ಪುತ್ರನೊಂದಿಗೆ ಬಂದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಹಳೇ ಲವರ್‌.??

- Advertisement -G L Acharya panikkar
- Advertisement -

ಆಕೆಗೆ ಮದುವೆಯಾಗಿ ಒಬ್ಬ ಪುತ್ರನಿದ್ದ. ಹಬ್ಬಕೆಂದು ಬಂದಾಕೆಯ ಬಾಳು ಅಂತ್ಯವಾಗಿದೆ. ಹಳೇ ಲವರ್‍ ಎಂದು ಹೇಳಿಕೊಂಡು ಬಂದವ ಪ್ರತಿಭಾಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಎಸ್ಕೇಪ್‌ ಆಗಲು ಯತ್ನಿಸಿ ಮೂಕಪ್ಪನವರ ಹನುಮಂತ ಪೊಲೀಸರ ಅತಿಥಿಯಾಗಿದ್ದಾನೆ.

ಹಬ್ಬಕ್ಕೆಂದು ಬಂದಿದ್ದ ಗೃಹಿಣಿಯನ್ನ ಭಗ್ನ ಪ್ರೇಮಿಯೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಿಜಯನಗರದ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ನಡೆದಿದೆ. ಪ್ರತಿಭಾ (27) ಕೊಲೆಯಾದ ಮೃತ ದುರ್ದೈವಿ. ಚಿರಸ್ತಹಳ್ಳಿ ಮೂಕಪ್ಪನವರ ಹನುಮಂತ ಬಂಧಿತ ಆರೋಪಿ.

ರಾಣೆ ಬೆನ್ನೂರಿನ ಪ್ರತಿಭಾ ಪುತ್ರನೊಂದಿಗೆ ದುಗ್ಗಾವತಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಭಗ್ನ ಪ್ರೇಮಿ ಚಿರಸ್ತಹಳ್ಳಿ ಮೂಕಪ್ಪನವರ ಹನುಮಂತ ಏಕಾಏಕಿ ದಾಳಿ ಮಾಡಿ ಪ್ರತಿಭಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆಯಾದ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಪೊಲೀಸರು ಪ್ರತಿಭಾಳನ್ನು ಕೊಂದು ಬಳಿಕ ಪರಾರಿ ಆಗಿದ್ದ ಹನಮಂತನನ್ನ ತಾಲೂಕಿನ ನೀಲಗುಂದ ಕ್ರಾಸ್ ಬಳಿ ಬಂಧಿಸಿದ್ದಾರೆ.

ವಿಚಾರಣೆ ವೇಳೆ ಪ್ರೀತಿಸುತ್ತಿದ್ದೆ ಎಂಬ ಕಿರಾತಕ
ಬಂಧನ ಬಳಿಕ ಪೊಲೀಸರು ಕೊಲೆ ಪ್ರಕರಣ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಪ್ರತಿಭಾಳನ್ನ ಪ್ರೀತಿಸುತ್ತಿದ್ದೆ ಅಂತ ಹೇಳಿಕೊಂಡು ಹನಮಂತ ತಿರುಗಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಆದರೆ ಬೇರೆ ಹುಡುಗನೊಂದಿಗೆ ಪ್ರತಿಭಾಗೆ ಮದುವೆ ಆಗಿತ್ತು ಇದರಿಂದ ಕೊಪಗೊಂಡು ಊರಿಗೆ ಬಂದಾಗ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರ ಎದುರು ಸತ್ಯ ಬಾಯಿಬಿಟ್ಟಿದ್ದಾನೆ.

ಇನ್ನು ಘಟನಾ ಸ್ಥಳಕ್ಕೆ ಡಿವೈಎಸ್ಪಿ ವಿ.ಎಸ್ ಹಾಲಮೂರ್ತಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹಲವಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

https://www.youtube.com/live/LL2jCid_XiE?feature=share

- Advertisement -

Related news

error: Content is protected !!