- Advertisement -
- Advertisement -
ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, “ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣದುಬ್ಬರ ದೇಶಕ್ಕೆ ಹಾನಿಕಾರಕವಾಗಿ ಪರಿಣಮಿಸಿದೆ” ಎಂದಿದೆ.
“ಮೋದಿ ಇದ್ದಲ್ಲಿ ಹಣದುಬ್ಬರ ಇದೆ” ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಲೇವಡಿ ಮಾಡಿದ್ದಾರೆ. “ಸರಕು ಹಾಗೂ ಸೇವಾ ತೆರಿಗೆಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್” ಎಂದು ಟೀಕಿಸಿದ್ದಾರೆ. “ಆರ್ಥಿಕ ಹಿಂಜರಿತ, ನಿರುದ್ಯೋಗ ಹಾಗೂ ಹಣದುಬ್ಬರವೇ ಬಡ ಜನರಿಗೆ ಮೋದಿ ಸರ್ಕಾರದ ಹೊಸ ವರ್ಷದ ಕೊಡುಗೆ” ಎಂದಿದ್ದಾರೆ. “೧೦ ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.೨ರಷ್ಟಿತ್ತು. ೨೦೨೧ರಲ್ಲಿ ಶೇ.೧೦ಕ್ಕೆ ಏರಿಕೆಯಾಗಿದೆ” ಎಂದಿದ್ದಾರೆ.
- Advertisement -