Friday, May 17, 2024
spot_imgspot_img
spot_imgspot_img

(ಫೆ.11) ಅಮಿತ್ ಶಾ ಭೇಟಿ ಹಿನ್ನಲೆ; ಮದ್ಯದಂಗಡಿ ಬಂದ್ ಜಿಲ್ಲಾಧಿಕಾರಿ ಆದೇಶ

- Advertisement -G L Acharya panikkar
- Advertisement -
vtv vitla

ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಚಿವರು, ಶಾಸಕರು ಹಾಗೂ ಬಿಜೆಪಿ ಹಿರಿಯ ನಾಯಕರು ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಫೆ.11ರಂದು ಮಧ್ಯಾಹ್ನ12ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬಾರ್, ವೈನ್ ಶಾಪ್ ಗಳು ಬಂದ್‌ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ವೃತ್ತ ನಿರೀಕ್ಷಕರು ಪುತ್ತೂರು ಮತ್ತು ಈಶ್ವರಮಂಗಲಕ್ಕೆ ಕೇಂದ್ರ ಗೃಹ ಸಚಿವರ ಸಹಿತ ಬೊಮ್ಮಾಯಿ, ಸಚಿವರುಗಳು ಆಗಮಿಸಲಿದ್ದು, ಭದ್ರತೆ ಹಾಗೂ ಸುರಕ್ಷತೆಯ ಹಿನ್ನೆಲೆಯಲ್ಲಿ ಬಾರ್ ಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ.

ಅಲ್ಲದೇ ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈಗಾಗಲೇ ಸ್ಥಳೀಯ ಶಾಸಕರ ಹಾಗೂ ಅಧಿಕಾರಿಗಳ ಪೂರ್ವತಯಾರಿ ಸಭೆ ನಡೆದಿದ್ದು,ಸೂಕ್ತ ಭದ್ರತೆಯ ದೃಷ್ಟಿಯಲ್ಲಿ ಪೊಲೀಸ್ ಇಲಾಖೆ ತಯಾರಿ ನಡೆಸಿಕೊಂಡಿದೆ. ಯಾವುದೇ ಕಾರಣಕ್ಕೂ ಸೂಚಿನೆ ಧಿಕ್ಕರಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ, ಬಾರ್ ಮಾಲೀಕರಿಗೆ ಸೂಚಿಸಿದರು

- Advertisement -

Related news

error: Content is protected !!