
ಬಂಟ್ವಾಳ: ಎಬಿವಿಪಿ ಬಂಟ್ವಾಳದ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರರವರ ಪುಣ್ಯತಿಥಿಯ ಅಂಗವಾಗಿ ಸಾಮಾಜಿಕ ಸಾಮರಸ್ಯ ದಿನ ವನ್ನು ಶಿಶುಮಂದಿರ ಬಿಸಿರೋಡಿನಲ್ಲಿ ಆಚರಿಸಲಾಯಿತು.


ಕಾರ್ಯಕ್ರಮವನ್ನು ಅಂಬೇಡ್ಕರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ಎಬಿವಿಪಿಯ ಹಿರಿಯ ಕಾರ್ಯಕರ್ತರಾದ ಸಂದೇಶ್ ರೈ ಮಜಕ್ಕಾರ್ ಅವರು ಸಾಮಾಜಿಕ ಸಾಮರಸ್ಯ ದ ಮಹತ್ವ ಹಾಗೂ ಡಾ.ಬಿ.ಆರ್ .ಅಂಬೇಡ್ಕರವರು ನಡೆದು ಬಂದ ದಾರಿಯ ಮಹತ್ವವನ್ನು ತಿಳಿಸಿದರು.


ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಸಂಚಾಲಕರಾದ ದಿನೇಶ್ ಕೊಯಿಲ ಇದ್ದರು. ಹಾಗೂ ಕಾರ್ಯಕ್ರಮದಲ್ಲಿ ತಾಲೂಕು ಸಹಸಂಚಾಲಕರಾದ ಅಖಿಲಾಷ್ , ಎಸ್.ವಿ.ಎಸ್ ಕಾಲೇಜಿನ ಪದವಿ ಘಟಕ ದ ಅಧ್ಯಕ್ಷರಾದ ಶ್ರೇಯಸ್ ,ಪದವಿ ಪೂರ್ವ ಘಟಕದ ಅಧ್ಯಕ್ಷರಾದ ಕೀರ್ತನ್ ಹಾಗೂ ಪ್ರಮುಖರಾದ ಶಿವಪ್ರಸಾದ್, ಪ್ರತೀಕ್ ,ದೀರಜ್ ,ರಂಜಿತ್ , ಅನ್ವೇಶ್ ,ಭರತ್ ,ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು , ಕಾರ್ಯಕ್ರಮದ ನಿರೂಪಣೆಯನ್ನು ಸಮೀಕ್ಷಾ ಹಾಗೂ ವಂದನಾರ್ಪಣೆ ಅನ್ವೇಶ್ ಇವರು ನಡೆಸಿದರು.



