- Advertisement -
- Advertisement -


ಬಂಟ್ವಾಳ: ಕೂಲಿ ಕಾರ್ಮಿಕನೊಬ್ಬ ಕಾಲು ಜಾರಿ ಕೆರೆಗೆ ಬಿದ್ದು, ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ನಡೆದಿದೆ.
ವಾಮದಪದವು ಅಜ್ಜಿಬೆಟ್ಟು ಗ್ರಾಮದ ಪಾಲೆದಡಿ ನಿವಾಸಿ ವಾಸು ಪೂಜಾರಿ (52) ಮೃತಪಟ್ಟ ವ್ಯಕ್ತಿ.
ಪಾಲೆದಡಿ ದಿ.ರಘಪತಿ ಭಟ್ ಅವರ ಮನೆಯ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದಿದ್ದು, ಬಿದ್ದ ಕೆಲವೇ ಸಮಯದಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದ ಅವರು ಮನೆಯವರಿಗೆ ತಿಳಿಸಿ,ಸ್ಥಳೀಯ ಯುವ ನಾಯಕ ದಿನೇಶ್ ಶೆಟ್ಟಿ ದಂಬೆದಾರ್ ಅವರ ತಂಡ ಕೆರೆಯಲ್ಲಿ ಹುಡುಕಿ ಇವರನ್ನು ಮೇಲಕ್ಕೆತ್ತಿ ಬದುಕಿಸುವ ಕೆಲಸಕ್ಕೆ ಪ್ರಯತ್ನ ಮಾಡಿದ್ದು, ಅವರ ಪ್ರಯತ್ನ ಫಲಿಸದೆ ಆದಾಗಲೇ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದೆ.
ಬಂಟ್ವಾಳ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
- Advertisement -