Sunday, April 28, 2024
spot_imgspot_img
spot_imgspot_img

ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಸಿಮೆಂಟ್ ಮಿಕ್ಸರ್ ಲಾರಿಯೊಂದು ಡಿಕ್ಕಿ ; ತಾಯಿ ಮಗನಿಗೆ ಗಾಯ

- Advertisement -G L Acharya panikkar
- Advertisement -

ಬಂಟ್ವಾಳ : ಸಿಮೆಂಟ್ ಮಿಕ್ಸರ್ ಲಾರಿಯೊಂದು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ತಾಯಿ ಮಗ ಇಬ್ಬರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಚೆಂಡ್ತಿಮಾರ್ ಎಂಬಲ್ಲಿ ನಡೆದಿದೆ.

ಇಲ್ಲಿನ ಸರಪಾಡಿ ಗ್ರಾಮದ ವಚ್ಚಾರ್ ನಿವಾಸಿಯಾಗಿರುವ ರಾಜೀವಿ ಹಾಗೂ ಅವರ ಮಗ ಸಂತೋಷ್ ಅಂಚನ್ ಗಾಯಗೊಂಡವರಾಗಿದ್ದಾರೆ. ಗಾಯಗೊಂಡವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಚೆಂಡ್ತಿಮಾರ್ ರಾಷ್ಟ್ರೀಯ ಹೆದ್ದಾರಿ ಅಪಘಾತ ಸ್ಪಾಟ್ ಆಗಿ ಮಾರ್ಪಡು ಆಗುತ್ತಿದ್ದೇಯಾ ಎನ್ನುವ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

ಹಲವು ದಿನಗಳ ಹಿಂದೆಯಷ್ಟೇ ಇದೇ ಚೆಂಡ್ತಿಮಾರ್ ರಸ್ತೆಯಲ್ಲಿ ಅಪಘಾತಗಳು ನಡೆದು ಜೀವ ಹಾನಿಯಾಗಿರುವಂತಹ ಘಟನೆಗಳು ಮಾಸುವ ಮುನ್ನವೇ ನಿನ್ನೆಯಷ್ಟೇ ದ್ವಿಚಕ್ರವಾಹನವೊಂದಕ್ಕೆ ಸಿಮೆಂಟ್ ಮಿಕ್ಸರ್ ಲಾರಿಯೊಂದು ಹೊಡೆದ ಪ್ರಕರಣ ನಡೆದಿದೆ. ಪದೇ ಪದೇ ಇದೇ ಜಾಗದಲ್ಲಿ ಅಪಘಾತ ನಡೆದು ಸ್ಪಾಟ್ ಡೆತ್ ಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿಗೆ ಶಾಸಕ ರಾಜೇಶ್ ನಾಯ್ಕ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಹಾಕುವಂತೆ ಸೂಚನೆ ನೀಡಿದ್ದರು.

- Advertisement -

Related news

error: Content is protected !!