ಬಂಟ್ವಾಳ : ಪುದು ಗ್ರಾಮ ಪಂಚಾಯತ್ ಕಚೇರಿ ಮುಂದೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನವನ್ನು ದುರುಪಯೋಗ ಪಡಿಸಿದ ವಿರುದ್ಧ ಮಂಗಳೂರು ಮಂಡಲದ ಉಪಾಧ್ಯಕ್ಷರು ವಿಠ್ಠಲ್ ಸಾಲ್ಯಾನ್ ನೇತೃತ್ವದಲ್ಲಿ ಬಿಜೆಪಿ ಮಂಗಳೂರು ಮಂಡಲ ಎಸ್.ಸಿ ಎಸ್.ಟಿ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಯಿತು.
ಸಂವಿಧಾನಕ್ಕೆ ಪೂರಕವಾಗಿ ಆಡಳಿತ ಮಾಡಬೇಕಾದ ಪುದು ಗ್ರಾ.ಪಂ. ಪರಿಶಿಷ್ಟರ ಮೀಸಲಾತಿಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಬೇರೆ ಕಡೆ ಕಾಮಗಾರಿ ನಡೆಸಿ ಅವರ ಭಾವನೆಗಳಿಗೆ ಧಕ್ಕೆ ಮಾಡಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ ಹೇಳಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾದ ಅಧ್ಯಕ್ಷ ವಿನಯ ನೇತ್ರ, ಕಾರ್ಯದರ್ಶಿ ಅಣ್ಣಿ ಏಳ್ತಿಮಾರ್, ಕೋಶಾಧಿಕಾರಿ ಪ್ರಕಾಶ್ ಸಿಂಫೊನಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ ಕುಂಪಲ , ಜಯಶ್ರೀ ಕರ್ಕೇರ , ಮಂಗಳೂರು ಮಂಡಲ ಬಿಜೆಪಿ ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮನೋಜ್ ಆಚಾರ್ಯ ನಾಣ್ಯ, ಮಂಡಲ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಶೆಟ್ಟಿ ಸುಜೀರು, ಸಾಮಾಜಿಕ ಜಾಲತಾಣ ಪ್ರಮುಖರಾದ ದಿನೇಶ್ ಶೆಟ್ಟಿ ಕೊಟ್ಟಿಂಜ, ಪುದು ಮಹಾಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿ ಸತೀಶ್ ನಾಯ್ಗ, ಮಹಾನಗರ ಪಾಲಿಕೆಯ ಕಾಪೋರೇಟರ್ ಮನೋಜ್ ಕುಮಾರ್, ಮಂಗಳೂರು ಮಂಡಲ ಎಸ್ ಸಿ ಮೋರ್ಚಾದ ಅಧ್ಯಕ್ಷ ಸಂದೇಶ್, ಕಾರ್ಯದರ್ಶಿ ವರುಣ್ ರಾಜ, ಮಂಗಳೂರು ಉತ್ತರ ಮಂಡಲದ ಅಧ್ಯಕ್ಷರಾದ ಆನಂದ ಪಾಂಗಾಳ್ , ಬಂಟ್ವಾಳ ಮಂಡಲ ಎಸ್ ಸಿ ಮೋರ್ಚಾ ಕಾರ್ಯದರ್ಶಿ ರಮೇಶ್ ಕುದ್ರೆಬೆಟ್ಟು , ಜಿಲ್ಲಾ ಮುಂಡಾಲ ವೇದಿಕೆ ಅಧ್ಯಕ್ಷರಾದ ಜಯಚಂದ್ರ , ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ನ ಅಧ್ಯಕ್ಷರಾದ ಸುಬ್ರಮಣ್ಯ ರಾವ್ , ಉಪಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪುಂಚಮೆ, ಪಂಚಾಯತ್ ಸದಸ್ಯರುಗಳಾದ ಸಂತೋಷ್ ನೆತ್ತರಕೆರೆ , ಆಶಾ ನಯನ , ಜಯಂತಿ , ಸರೋಜಿನಿ , ಹಿರಿಯರಾದ ಭಾಸ್ಕರ ಚೌಟ ಕುಮುಡೇಲು, ಸೋಮಪ್ಪ ಕೋಟ್ಯಾನ್ , ವೆಂಕಪ್ಪ ಗುರಿಕಾರ , ಗಿರಿಯಪ್ಪ ಕುಂಭ್ಡೇಲು , ಸೋಮನಾಥ ಮತ್ತಿತರರು ಉಪಸ್ಥಿತರಿದ್ದರು.