- Advertisement -
- Advertisement -
ಬಂಟ್ವಾಳ: ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫ್ರೆಂಡ್ಸ್ ಕ್ಲಬ್ ಮಿತ್ತೂರು ಮತ್ತು ಫ್ರೆಂಡ್ಸ್ ನವೋದಯ ಸ್ವಸಹಾಯ ಸಂಘದ ವತಿಯಿಂದ ಸಹಾಯ ಧನ ವಿತರಣೆ ಮಾಡಲಾಯಿತು.
ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಗಾಯಗೊಂಡಿರುವ ಮಿತ್ತೂರು ಬೀಡಿನ ಮಜಲು ನಿವಾಸಿಯಾಗಿರುವ ಉತ್ತಮ ಕಬಡ್ಡಿ ಆಟಗಾರ ಧನುಷ್ ಶೆಟ್ಟಿಯವರಿಗೆ ಮನೆಗೆ ತೆರಳಿ ರೂ 10,000/ ಸಹಾಯಧನ ನೀಡಲಾಯಿತು.
ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬಿನ ಅಧ್ಯಕ್ಷರಾದ ಎಂ ಸುಧೀರ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಸಂತ ಪೂಜಾರಿ ,ಕ್ರೀಡಾ ಕಾರ್ಯದರ್ಶಿ ಈಶ್ವರಗೌಡ ಮತ್ತು ಸದಸ್ಯರಾದ ವಾಸುದೇವ ಕುಲಾಲ್, ಉಮೇಶ್ ಸುವರ್ಣ, ಸುರೇಶ್ ಎಂ, ಈಶ್ವರ ಅಮೀನ್, ಸುಧಾಕರ ಗೌಡ, ಗಂಗಾಧರ ಸುವರ್ಣ, ದಾಮೋದರ ಶೆಟ್ಟಿ, ಮೋಹನ್ ಸುವರ್ಣ, ಚಂದ್ರಹಾಸ ಬಿ, ಜಗದೀಶ್ ಹಾಗೂ ಧನುಷ್ ತಂದೆ ಮೋಹನ್ ಶೆಟ್ಟಿ ಮತ್ತು ಲೀಲಾವತಿ ಉಪಸ್ಥಿತರಿದ್ದರು.
- Advertisement -