- Advertisement -
- Advertisement -
ಬಂಟ್ವಾಳ: ತಾಲೂಕಿನ ಕೆಂಪುಗುಡ್ಡೆ ಮನೆಯ ಅಂಗಳದಲ್ಲಿ ಚಿರತೆಯೊಂದು ಓಡಾಡುವ ದೃಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದ್ದು, ಆತಂಕಗೋಳಾದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
ಅಬ್ರಾಹಂ ವರ್ಗೀಸ್ ಎಂಬವರ ಮನೆಯಂಗಳದಲ್ಲಿ ಚಿರತೆ ಬಂದು ಹೋಗುವ ದೃಶ್ಯ ಕಂಡು ಬಂದಿದ್ದು, ಈ ದೃಶ್ಯದ ಪೂಟೇಜ್ ಸಹಿತ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಚಿರತೆಯನ್ನು ಹಿಡಿಯುವಂತೆ ಮನವಿ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಇಲ್ಲಿನ ಕೆಲವು ಮನೆಯ ನಾಯಿಗಳು ಕಾಣೆಯಾಗಿದ್ದು, ಚಿರತೆ ತಿಂದಿದೆ ಎಂಬ ಸಂಶಯ ವ್ಯಕ್ತವಾಗಿದೆ. ಹಾಗಾಗಿ ಚಿರತೆಯನ್ನು ಹಿಡಿದು, ಈ ಭಾಗದ ಜನರ ಆತಂಕವನ್ನು ದೂರ ಮಾಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದು, ಅರಣ್ಯ ಇಲಾಖೆಯವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ.
- Advertisement -