Sunday, May 19, 2024
spot_imgspot_img
spot_imgspot_img

ಬಂಟ್ವಾಳ: ರಸ್ತೆಯಲ್ಲಿ ಸಿಕ್ಕಿಬಿದ್ದ 50 ಗ್ರಾಂ ಚಿನ್ನಾಭರಣವಿದ್ದ ವ್ಯಾನಿಟ್ ಬ್ಯಾಗ್ ನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

- Advertisement -G L Acharya panikkar
- Advertisement -

ಬಂಟ್ವಾಳ: ರಸ್ತೆಯಲ್ಲಿ ಸಿಕ್ಕಿಬಿದ್ದ ವ್ಯಾನಿಟ್ ಬ್ಯಾಗ್ ನ್ನು ಆಟೋ ರಿಕ್ಷಾ ಚಾಲಕ ಪೋಲೀಸರ ಸಮಕ್ಷಮದಲ್ಲಿ ಮಾಲೀಕರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಮೂಡ ನಿವಾಸಿ ಅಬ್ದುಲ್ ಮಜೀದ್ ಎಂಬವರು ತಮ್ಮ ಪತ್ನಿ ರುಕ್ಸಾನರವರನ್ನು ಮಾಣೆಯಿಂದ ಬಿ. ಸಿ ರೋಡ್ ಗೆ ಸ್ಕೂಟಿಯಲ್ಲಿ ಕುಳ್ಳಿರಿಸಿಕೊಂಡು ತೆರಳುತ್ತಿದ್ದ ವೇಳೆ ರುಕ್ಸಾನರವರ ವ್ಯಾನಿಟಿ ಬ್ಯಾಗ್ ಬಿದ್ದು ಹೋಗಿದ್ದು, ಬ್ಯಾಗ್ ನಲ್ಲಿ 50 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ಇದ್ದಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ಥಳೀಯರಲ್ಲಿ ಮಾಹಿತಿ ಸಂಗ್ರಹಿಸಿದ್ದರು.

ಆಟೋ ರಿಕ್ಷಾ ಚಾಲಕರಾದ ಶಂಕರ್ ನಾರಾಯಣ ಶೆಟ್ಟಿ ಎಂಬವರು ಮಾಣೆಯಿಂದ ಕಲ್ಲಡ್ಕಕ್ಕೆ ತೆರಳುವ ವೇಳೆ ವ್ಯಾನಿಟಿ ಬ್ಯಾಗ್ ದೊರೆತಿದ್ದು ಅದನ್ನು ಶಂಕರ್ ನಾರಾಯಣ ಶೆಟ್ಟಿಯವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಬಂದು ಪೊಲೀಸರ ಸಮಕ್ಷಮದಲ್ಲಿ ಚಿನ್ನಾಭರಣವನ್ನು ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

- Advertisement -

Related news

error: Content is protected !!