- Advertisement -
- Advertisement -
ಬಂಟ್ವಾಳ: ವಸ್ತುಗಳನ್ನು ಡೆಲಿವರಿ ಮಾಡುವ ಯುವಕನೋರ್ವನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ಕೆಳಗಿನಪೇಟೆ ಎಂಬಲ್ಲಿ ಹಲ್ಲೆ ನಡೆದಿದೆ.
ಗುರುಪ್ರಸಾದ್ ಹಲ್ಲೆಗೊಳಗಾದ ಯುವಕ. ಹಲ್ಲೆಗೈದ ತೌಸೀಫ್ ಎಂಬಾತನ ಮೇಲೆ ದೂರು ದಾಖಲಾಗಿದೆ. ವಸ್ತುಗಳನ್ನು ಡೆಲಿವರಿ ಮಾಡುವ ಕುರಿತು ಕೆಳಗಿನಪೇಟೆಗೆ ಇಂದು ಬಂದಿದ್ದ ವೇಳೆ ಮಾತಿನ ಚಕಮಕಿಯಾಗಿದ್ದು, ಈ ಸಂದರ್ಭ ತನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಗುರುಪ್ರಸಾದ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
- Advertisement -