ಬೆಂಗಳೂರು: ‘ಬಿಗ್ಬಾಸ್ ಓಟಿಟಿ ಕನ್ನಡ’ದ ಮೊದಲ ಸೀಸನ್ಗೆ ಇಂದು ಅಧಿಕೃತವಾಗಿ ಚಾಲನೆ ಸಿಗಲಿದೆ. ಇಂದು ಸಂಜೆ 7ಕ್ಕೆ ಕಾರ್ಯಕ್ರಮ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಸುದೀಪ್ ಸ್ಪರ್ಧಿಗಳನ್ನು ಪರಿಚಯಿಸಿ ಮನೆಗೆ ಕಳುಹಿಸಲಿದ್ದಾರೆ.
ಈ ಕಾರ್ಯಕ್ರಮವು ವೂಟ್ ಸೆಲೆಕ್ಟ್ ಓಟಿಟಿಯಲ್ಲಿ ನೇರವಾಗಿ ಪ್ರಸಾರವಾಗಲಿದ್ದು, 16 ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಜಗತ್ತಿನ ಮುಂದೆ ಸೆಲೆಬ್ರೆಟಿಗಳ ವ್ಯಕ್ತಿತ್ವ 42 ದಿನಗಳ ಕಾಲ ತೆರೆದ ಪುಸ್ತಕದಂತೆ ಇರುತ್ತೆ. ಬಿಗ್ಬಾಸ್ ಕನ್ನಡ ಓಟಿಟಿಯ ಸೀಸನ್ 1 ಸಖತ್ ಚಾಲೆಂಜ್ ಆಗಿದೆ. ವೋಟ್ನಲ್ಲಿ ಪ್ರಸಾರ ಆಗುತ್ತಿರುವ ಈ ರಿಯಾಲಿಟಿ ಶೋಗೆ ಯೋಚನೆ ಮಾಡಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಸಿನಿಮಾ ಕ್ಷೇತ್ರ, ಕಿರುತೆರೆ, ಪತ್ರಿಕೋದ್ಯಮ, ಕ್ರೀಡೆ, ಜ್ಯೋತಿಷ್ಯ ಸೇರಿದಂತೆ ಎಲ್ಲಾ ವಿಭಾಗದಿಂದಲೂ ಜನಪ್ರಿಯರಾಗಿರುವವನ್ನು ಆಯ್ಕೆ ಮಾಡಲಾಗಿದೆ.
ಗಿರಿಗಿಟ್ ಖ್ಯಾತಿಯ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಅಕ್ಷತಾ ಕುಕ್ಕಿ, ರೇಖಾ ದಾಸ್, ಮುಖ್ಯಮಂತ್ರಿ ಚಂದ್ರು, ಪುಟ್ಟ ಗೌರಿ ಖ್ಯಾತಿಯ ಸಾನ್ಯ ಐಯ್ಯರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್, ಪತ್ರಿಕೋದ್ಯಮದಿಂದ ಸೋಮಣ್ಣ ಮಾಚಿಮಾಡ, ಸಂಖ್ಯಾ ಶಾಸ್ತ್ರಜ್ಞ ಆರ್ಯವರ್ಧನ್, ಕ್ರಿಕೆಟ್ ಕ್ಷೇತ್ರದಿಂದ ವಿನಯ್ ಕುಮಾರ್, ಸೋಶಿಯಲ್ ಮೀಡಿಯಾ ಸ್ಟಾರ್ ಚಿಕ್ಕಮಗಳೂರಿನ ಕಾಫಿ ನಾಡು ಚಂದು, ಸೋನು ಶ್ರೀನಿವಾಸ್ ಗೌಡ, ಎಂಟಿವಿ ರೋಡೀಸ್ 18 ವಿಜೇತ ಜೋಡಿ ಜಶ್ವಂತ್ ಬೋಪಣ್ಣ ಹಾಗೂ ನಂದು, ಡಿಜಿಟಫ್ ಕ್ರಿಯೇಟರ್ ಕಿರಣ್ ಯೋಗೇಶ್ವರ್, ಬಡ್ಡೀಸ್ ಸಿನಿಮಾದ ಉದಯೋನ್ಮುಖ ನಟ ಉದಯ್ ಸೂರ್ಯಯ ಎಂಟ್ರಿ ಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.