Sunday, June 29, 2025
spot_imgspot_img
spot_imgspot_img

ಬಿಜೆಪಿ ದೇಶದ್ರೋಹಿ ಭಯೋತ್ಪಾದಕರನ್ನು ಸಾಕುತ್ತಿದ್ದಾರೆ.!? ಬ್ಯಾನ್ PFI & SDPI ಆಂದೋಲನ ಶುರು ಮಾಡ್ತೀವಿ – ಪ್ರಮೋದ್ ಮುತಾಲಿಕ್

- Advertisement -
- Advertisement -

ಪಿಎಫ್ ಐ, ಎಸ್ ಡಿಪಿಐ ಬ್ಯಾನ್ ವಿಚಾರದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಮುತಾಲಿಕ್, ಪಿಎಫ್ ಐ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ, ಧಮ೯ ವಿರೋಧಿ ಕೆಲಸ ಮಾಡ್ತಿದೆ. ದಾಖಲೆ ಸಮೇತ ಎಲ್ಲ ಇದೆ, ಕಾಂಗ್ರೆಸ್ ನವರು ಸಹ ಬ್ಯಾನ್ ಮಾಡಿ ಅಂತ ಹೇಳ್ತಿದ್ದಾರೆ. ಕಮ್ಯನಿಷ್ಟ್ರು ಬ್ಯಾನ್ ಮಾಡಿ ಅಂತಿದ್ದಾರೆ. ನೀವು ಕಣ್ಣಿಡ್ತಿವಿ ಅಂತಿದ್ದೀರಿ, ಇದನ್ನು ನಾವು ಒಪ್ಪಲ್ಲ ಎಂದು ಹೇಳಿದ್ದಾರೆ.

ಪಿಎಫ್ ಐ ಮತ್ತು ಎಸ್ ಡಿಪಿಐ ಯನ್ನು ಪ್ರಮೋದ್ ಮುತಾಲಿಕ್ ಭಯೋತ್ಪಾದಕ‌ ಸಂಘಟನೆಗೆ ಹೋಳಿಕೆ ಮಾಡಿದ್ದಾರೆ. ಪಿಎಫ್ ಐ, ಎಸ್ ಡಿಪಿಐ, ಸಿಎಫ್ ಐ ಬ್ಯಾನ್ ಮಾಡಬೇಕೆಂದು ಏಪ್ರೀಲ್‌ ಕೊನೆಯಿಂದ ರಾಜ್ಯಾದ್ಯಂತ ಹೋರಾಟ ಮಾಡ್ತೀವಿ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಬಿಜೆಪಿಯವರು ದೇಶದ್ರೋಹಿ ಭಯೋತ್ಪಾದಕರನ್ನು ಸಾಕುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ಹೇಳೋದಿಷ್ಟೇ ದೇಶದ, ಸಮಾಜದ, ಧಮ೯ದ ಸುರಕ್ಷತೆ ಹಿನ್ನೆಲೆ ಬ್ಯಾನ್ ಮಾಡಿ. ಬ್ಯಾನ್ ಮಾಡದೇ ಹೋದರೆ ಬಿಡಲ್ಲ ಎಂದು ಹೇಳಿದ್ದಾರೆ. ನಾವು ಕುಡುಕ ಗಂಡನನ್ನು ಮದುವೆ ಮಾಡಿಕೊಂಡು ಬಿಟ್ಟಿದೀವಿ ಬಿಡಂಗೂ ಇಲ್ಲ ಸಂಸಾರ ಮಾಡಂಗೂ ಇಲ್ಲ ಎಂದು ಬಿಜೆಪಿಯನ್ನು ಕುಡುಕ ಗಂಡನಿಗೆ ಹೋಲಿಸಿದ್ದಾರೆ. ಬಿಜೆಪಿ ಯಾಕೆ, ಪಿಎಫ್‌ಐ ಬ್ಯಾನ್ ಮಾಡ್ತಿಲ್ಲ ಅಂತ ಬಟಾಬಯಲು ಮಾಡಬೇಕಾಗುತ್ತೆ. ಬ್ಯಾನ್ ಪಿಎಫ್‌ಐ ಆಂದೋಲನ ಶುರು ಮಾಡ್ತೀವಿ‌. ದಾಖಲೆಯನ್ನ ಬಿಜೆಪಿಯವರೇ ಬಿಡುಗಡೆ ಮಾಡಿದ್ದಾರೆ‌. ಆದ್ರೆ ಈಗ ಬಿಜೆಪಿಯವರೇ ಉಲ್ಟಾ . ನೀವೇ ಸಾಪ್ಟ್ ಕಾನ೯ರ್ ಮೂಲಕ ಸಾಕುತ್ತಿದ್ದೀರಿ ಅನ್ನೋ ಸಂಶಯ ಕಾಡ್ತಿದೆ. ಇದನ್ನು ನಾವು ಒಪ್ಪಲ್ಲ ಎಂದು ಹೇಳಿದ್ದಾರೆ. ಬಿಜೆಪಿಯವರೇ ನೀವು ಈ ಸಂಘಟನೆಗಳ ಮೇಲೆ ನಿಗಾ ಇರಿಸಿದ್ದರೆ ಹಷ೯ನ ಕೊಲೆಯಾಗುತ್ತಿರಲಿಲ್ಲ. ಒಂದು ಸಂಸ್ಥೆ ಇಡೀ ದೇಶದಲ್ಲೆ ಭಯೋತ್ಪಾದನೆ ಚಟುವಟಿಕೆ ಮಾಡ್ತಿದೆ ಎಂದು ಹೇಳಿದ್ದಾರೆ.

- Advertisement -

Related news

error: Content is protected !!