Thursday, April 25, 2024
spot_imgspot_img
spot_imgspot_img

ಬೆಳ್ತಂಗಡಿ: ಅಚ್ಚರಿ ಮೂಡಿಸಿದ “ರಕ್ತ ಮಳೆ”.!!

- Advertisement -G L Acharya panikkar
- Advertisement -

ಶಿರ್ಲಾಲು: ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಬಳ್ಳಿದಡ್ಡ ಮನೆಯ ಸೂರ್ಯನಾರಾಯಣ ಭಟ್ ಅವರ ಮನೆಯಲ್ಲಿ, ಕೆಂಪು ಮಳೆಯಾದ ಘಟನೆ ನಡೆದಿದೆ.

ಕೆಂಪು ಮಳೆ ತೀರ ಅಪರೂಪವಾದದ್ದು. ಮನೆಗೆ ಅಳವಡಿಸಲಾಗಿದ್ದ ಮೇಲಾವಣಿಯಿಂದ ಹರಿದು ಬಂದ ಮಳೆ ನೀರು ಮನೆಯಲ್ಲಿ ಬಕಟ್, ಡ್ರಮ್ ಗಳಲ್ಲಿ ಶೇಖರಣೆಯಾದ ನೀರು ಕೆಂಪು ಬಣ್ಣದಲ್ಲಿ ತುಂಬಿಕೊಂಡಿದ್ದು ಬೆಳಕಿಗೆ ಬಂದಿದೆ.

ಈ ನೀರನ್ನು ಇಗಾಗಲೇ ಸಂಶೋಧನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮನೆಯ ಯಜಮಾನ ಸೂರ್ಯನಾರಾಯಣ ಭಟ್‌ ತಿಳಿಸಿದ್ದಾರೆ. ಕಂಪು ಮಳೆ ನೀರಿನ ಬಗ್ಗೆ ಇನ್ನಷ್ಟೆ ವರದಿ ಬರಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದ್ದು ಲ್ಯಾಬ್ ವರದಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!