- Advertisement -
- Advertisement -
ಬೆಳ್ತಂಗಡಿ: ಗೂಡಂಗಡಿ ಹಾಗೂ ಗೋಲ್ಡನ್ ಜುವೆಲ್ಲರ್ಸ್ ವರ್ಕ್ಸ್ ನ ಬೀಗವನ್ನು ಮುರಿದು, ಒಳನುಗ್ಗಿದ ಕಳ್ಳರು ಸಿಗರೇಟು, ಚಿನ್ನಾಭರಣ ಸಹಿತ ಸೊತ್ತುಗಳ ಕಳವುಗೈದ ಘಟನೆ ನಿನ್ನೆ ರಾತ್ರಿ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಸೀತಾರಾಮ ಭೈರ ಎಂಬವರ ಗೂಡಂಗಡಿಯಿಂದ ನಗದು ಸಹಿತ ರೂ.15 ಸಾವಿರ ಮೌಲ್ಯದ ಸಿಗರೇಟು ಕಳ್ಳತನವಾಗಿದ್ದು,ಹಾಗೂ ಪ್ರಶಾಂತ್ ಆಚಾರ್ಯ ಎಂಬವರ ಗೋಲ್ಡನ್ ಜುವೆಲ್ಲರ್ಸ್ ಅಂಗಡಿಯಿಂದ ಬೆಳ್ಳಿ ಆಭರಣ ಹಾಗೂ ರಿಪೇರಿಗೆ ಬಂದ ಚಿನ್ನಾಭರಣ ಸೇರಿ ರೂ.50 ಸಾವಿರಕ್ಕೂ ಹೆಚ್ಚು ಮೌಲ್ಯದ ಸೊತ್ತುಗಳು ಕಳ್ಳತನವಾಗಿದೆ .
ಇನ್ನು ಖದೀಮರು ಎರಡು ಅಂಗಡಿಗಳ 4 ಬೀಗವನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
- Advertisement -