- Advertisement -
- Advertisement -
ಧರ್ಮಸ್ಥಳ: ಬೃಹತ್ ನೀರಿನ ಪೈಪ್ಗಳನನ್ನು ಲಾರಿಯಿಂದ ಇಳಿಸುವ ವೇಳೆ ಆಕಸ್ಮಿಕವಾಗಿ ಪೈಪ್ ಮೈ ಮೇಲೆ ಬಿದ್ದು ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಲಾರಿ ಚಾಲಕ ಮಧುಸೂದನ್ ರೆಡ್ಡಿ ಮೃತಪಟ್ಟ ಲಾರಿ ಚಾಲಕ.
ಕುಡಿಯುವ ನೀರಿನ ಕಾಮಗಾರಿಗಾಗಿ ತೆಲಂಗಾಣದಿಂದ ಪೈಪ್ ತರಲಾಗಿತ್ತು. ಧರ್ಮಸ್ಥಳ ಗ್ರಾಮಕ್ಕೆ ಸರಕಾರದಿಂದ ಕುಡಿಯುವ ನೀರಿನ ಕಾಮಗಾರಿ ಸರಕಾರದಿಂದ ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿದೆ. ಲಾರಿಯಿಂದ ಪೈಪ್ ಇಳಿಸುತ್ತಿದ್ದ ಆಕಸ್ಮಿಕವಾಗಿ ಪೈಪ್ ಲಾರಿ ಚಾಲಕ ಮಧುಸೂದನ್ ರೆಡ್ಡಿ ಎಂಬವರ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -