Saturday, April 27, 2024
spot_imgspot_img
spot_imgspot_img

ಬೆಳ್ತಂಗಡಿ: ಮಾರಕಾಸ್ತ್ರಗಳಿಂದ ಕಡಿದು ವ್ಯಕ್ತಿಯ ಕೊಲೆ ಪ್ರಕರಣ; ಓರ್ವ ಆರೋಪಿಯ ಬಂಧನ..!

- Advertisement -G L Acharya panikkar
- Advertisement -
vtv vitla
vtv vitla

ಬೆಳ್ತಂಗಡಿ: ವ್ಯಕ್ತಿಯೊರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಜಯಚಂದ್ರ ಎನ್ನಲಾಗಿದೆ.

ಸಾಂತಪ್ಪ ಗೌಡನು ಜೀವ ವಿಮಾವೊಂದರಲ್ಲಿ ಏಜೆಂಟ್‌ ಕೆಲಸ ಮಾಡಿಕೊಂಡಿದ್ದು, ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಾಂತಪ್ಪ ಗೌಡ ಕೆಲಸಕ್ಕೆಂದು ಮನೆಯಿಂದ ಹೊರಟು ಹೋಗುತ್ತಿದ್ದ ವೇಳೆ ನೆರೆ ಮನೆಯ ಸಂಬಂಧಿ ಜಯಚಂದ್ರ ಎಂಬಾತನು ರಸ್ತೆಬದಿಯಲ್ಲಿ ಕೆಲಸದಾಳುಗಳೊಂದಿಗೆ ಪೊದೆ ತೆಗೆಯುತ್ತಿದ್ದ ಸಂದರ್ಭದಲ್ಲಿ ಸಾಂತಪ್ಪನು ಜಯಚಂದ್ರರಲ್ಲಿ ರಸ್ತೆ ಬದಿಯಲ್ಲಿರುವ ಪೊದೆಯನ್ನು ಏಕೆ ತೆಗೆಯುತ್ತೀರಿ ಎಂದು ಪ್ರಶ್ನಿಸಿದ್ದಾರೆ.

vtv vitla

WATCH DKD PRATHIKSHA’S EXCLUSIVE INTERVIEW

ಈ ವೇಳೆ ಆರೋಪಿ ಜಯಚಂದ್ರ ಅವಾಚ್ಯ ಶಬ್ದಗಳಿಂದ ಬೈದು ನೀನು ಯಾರು? ಕೇಳಿ ಕೈಯಲ್ಲಿದ್ದ ಕತ್ತಿಯಿಂದ ಏಕಾಎಕಿ ಎಡ ಬದಿಯ ಕೆನ್ನೆಗೆ ಹಾಗೂ ಹಿಂಬದಿಯ ಕುತ್ತಿಗೆಯನ್ನು ಕಡಿದಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಸಾಂತಪ್ಪ ಗೌಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಸಾಂತಪ್ಪ ಗೌಡ ಹಾಗೂ ಜಯಚಂದ್ರನ ಮನೆಯವರಿಗೂ ಜಮೀನು ವಿಚಾರದಲ್ಲಿ ಸುಮಾರು ವರ್ಷಗಳಿಂದ ತಕರಾರು ಇದ್ದು, ಅದೇ ವಿಚಾರದಲ್ಲಿ ಜಯಚಂದ್ರನು ಸಾಂತಪ್ಪನನ್ನು ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದು, ಅದೇ ವಿಚಾರದಲ್ಲಿ ಜಯಚಂದ್ರನು ಸಾಂತಪ್ಪನನ್ನು ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!