- Advertisement -
- Advertisement -
ಬೆಳ್ತಂಗಡಿ: ನಿನ್ನೆ ಮಧ್ಯಾಹ್ನ ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯ ಪರಾರಿ ನಿವಾಸಿ ಸುಭಾಷ್ ಹಾಗೂ ಸುಚಿತ್ರಾ ದಂಪತಿ ಪುತ್ರಿ ಎರಡು ವರ್ಷದ ಧೃತ್ವಿ ಆಟವಾಡುತ್ತಾ ನಾಪತ್ತೆಯಾಗಿದ್ದಳು. ಇಂದು ಆಕೆಯ ಶವ ನದಿಯಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ದಳದವರು ಶವ ಪತ್ತೆ ಹಚ್ಚಿದ್ದಾರೆ ವೇಣೂರು ಪೊಲೀಸರು ಶವ ಮಹಜರು ನಡೆಸುತ್ತಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಸಂಜೆಯವರೆಗೆ ಮಗುವಿಗಾಗಿ ನದಿಯ ಬಳಿ ಹುಡುಕಾಟ ನಡೆಸಲಾಗಿತ್ತು. ಕತ್ತಲಾದ್ದರಿಂದ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಮಗುವಿನ ಶವ ನದಿಯಲ್ಲಿ ಪತ್ತೆಯಾಗಿದೆ.
- Advertisement -