Monday, June 30, 2025
spot_imgspot_img
spot_imgspot_img

ಬೆಳ್ತಂಗಡಿ: ಸೌತಡ್ಕ ಶ್ರೀ ಮಹಾಗಣಪತಿಗೆ ಸುವರ್ಣ ಕವಚ ಸಮರ್ಪಣೆ

- Advertisement -
- Advertisement -

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಪ್ರಸಿದ್ಧ ಗಣೇಶನ ದೇವಾಲಯಗಳಿವೆ. ಇದರಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯವು ಒಂದಾಗಿದೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಬೇರೆಡೆಯಲ್ಲಿ ದೇವತಾ ವಿಗ್ರಹಗಳಿಗೆ ಗುಡಿಗಳಿರುವಂತೆ, ಇಲ್ಲಿ ಗಣೇಶನಿಗೆ ಯಾವುದೇ ಗುಡಿ ಗೋಪುರಗಳಿಲ್ಲ. ಬಯಲಿನಲ್ಲೇ ನೆಲೆನಿಂತ ಗಣಪನ್ನು ಇಲ್ಲಿ ನೋಡಬಹುದು.

ಈ ದೇವಾಲಯಕ್ಕೆ ಅಮೇರಿಕಾದ ಲಾಸ್‌ ಎಂಜಲೀಸ್‌ನಲ್ಲಿರುವ ಪುತ್ತಿಗೆ ಮಠದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಜಿರೆಯ ಸುಜಾತಾ ಮತ್ತು ವಾಸುದೇವ ಭಟ್ ಅವರ ಪುತ್ರ ಜ್ಞಾನಮೂರ್ತಿ ಭಟ್‌ರವರು ಸೌತಡ್ಕ ಶ್ರೀ ಮಹಾಗಣಪತಿ ದೇವರಿಗೆ ಬಂಗಾರದ ಮುಖವಾಡವಿರುವ ಬೆಳ್ಳಿಯ ಕವಚ ಹೊಂದಿರುವ ಸುವರ್ಣ ಕವಚವನ್ನು ಸಮರ್ಪಿಸಿದ್ದಾರೆ.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ ರಾವ್‌, ಸದಸ್ಯರಾದ ಪುರಂದರ ಕಡೀರ, ಪ್ರಶಾಂತ್‌ ಪೂವಜೆ, ವಿಠ್ಠಲ ಕುರ್ಲೆ, ಮುಖ್ಯ ಕಾರ್ಯ ನಿರ್ವಣಾಧಿಕಾರಿ ದಯಾನಂದ ಹೆಗ್ಡೆ, ಅರ್ಚಕರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!