Thursday, May 9, 2024
spot_imgspot_img
spot_imgspot_img

ಎಸ್.ಎಲ್.ವಿ ಕಲರ್ಸ್ ನ ದಿವಾಕರ ದಾಸ್ ನೇರ್ಲಾಜೆಯವರಿಂದ ಚಲನಚಿತ್ರ ನಟ ಶಿವರಾಜ್ ಕುಮಾರ್ ರವರ ಭೇಟಿ

- Advertisement -G L Acharya panikkar
- Advertisement -

ವಿಟ್ಲ: ಮೈಸೂರಿನ ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ. ನ ಆಡಳಿತ ನಿರ್ದೇಶಕರಾದ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿವಾಕರ ದಾಸ್ ರವರು ಕನ್ನಡ ಚಲನಚಿತ್ರ ನಟ, ನಿರ್ಮಾಪಕ ಶಿವರಾಜ್ ಕುಮಾರ್ ರವರನ್ನು ಮೈಸೂರಿನಲ್ಲಿ ಭೇಟಿ ಮಾಡಿದರು.

ಶಿಕ್ಷಣ ಕ್ಷೇತ್ರದ ಪುಸ್ತಕ ವ್ಯಾಪಾರದಲ್ಲಿ ಯಶಸ್ಸನ್ನು ಕಂಡ ದಿವಾಕರ್ ದಾಸ್ ರವರು ಎಸ್.ಎಲ್.ವಿ. ಕಲರ್ಸ್ ಎಂಬ ಬ್ಯಾನರ್ ನ ಅಡಿಯಲ್ಲಿ ಮುಂದಿನ ದಿನಗಳಲ್ಲಿ ನಿರ್ಮಾಣಗೊಳ್ಳಲಿರುವ ಬಿಗ್ ಬಜೆಟ್ ಚಿತ್ರವೊಂದರ ಬಗ್ಗೆ ದಿವಾಕರ ದಾಸ್ ರವರು ಶಿವರಾಜ್ ಕುಮಾರ್ ರವರೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು.

ಈ ಬಗ್ಗೆ ಮಾಹಿತಿ ಪಡೆದುಕೊಂಡ ಶಿವರಾಜ್ ಕುಮಾರ್ ರವರು ಸಲಹೆ ಸೂಚನೆಗಳನ್ನು ನೀಡಿದರು‌. ಹೊಸ ಚಲನಚಿತ್ರದ ಬಗ್ಗೆ ಈ ಹಿಂದೆ ಶಿವರಾಜ್ ಕುಮಾರ್ ರವರ ಪತ್ನಿ ಗೀತಾ ಶಿವರಾಜ್‍ಕುಮಾರ್ ರವರೊಂದಿಗೂ ಚರ್ಚೆ ನಡೆಸಲಾಗಿತ್ತು. ಈ ಬಿಗ್ ಬಜೆಟ್ ಸಿನಿಮಾ ಎಸ್.ಎಲ್. ವಿ. ಕಲರ್ಸ್ ಬ್ಯಾನರ್ ನ ಚೊಚ್ಚಲ ಚಿತ್ರವಾಗಿದ್ದು ಶೀಘ್ರದಲ್ಲಿ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇದೆ.

- Advertisement -

Related news

error: Content is protected !!