- Advertisement -
- Advertisement -
ಬೆಳ್ಳಾರೆ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಕಾಂಗ್ರೆಸ್ ಮುಖಂಡರ ನಿಯೋಗ ಭೇಟಿ ನೀಡಿದ್ದು, ಕುಟುಂಬಸ್ಥರರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ಸಾಂತ್ವನ ಹೇಳುವ ಮಧ್ಯೆ ಪ್ರವೀಣ್ ಚಿಕ್ಕಪ್ಪ ಜಯರಾಮ್ ಮಾತನಾಡುವಾಗ ರಮನಾಥ ರೈ ನೀವು ಮಾತನಾಡಬೇಡಿ ಅಂದಾಗ ಆಕ್ರೋಶಗೊಂಡ ಕುಟುಂಬಸ್ಥರು. ಇಲ್ಲಿಯವರೆಗೆ ಕುಟುಂಬದೊಂದಿಗೆ ನಾವೇ ಇದ್ದದ್ದು ನೀವು ಈಗ ಯಾಕೆ ಬಂದಿದ್ದು? ನಾಡಿದ್ದು ಕೊಲೆಗಾರರಿಗೆ ಜಾಮೀನು ಹಾಕುವುದೂ ನೀವೇ ಈಗ ಯಾಕೆ ಬಂದಿದ್ದೀರಿ, ಶೂ ಹಾಕಿಕೊಂಡು ಯಾಕೆ ಒಳಗೆ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರು ತೆರಳುವಾಗ ಆಕ್ರೋಶಿತರಿಂದ ಕಾಂಗ್ರೆಸ್ ಗೆ ಧಿಕ್ಕಾರವನ್ನು ಹಾಕಿದರು.
- Advertisement -