Monday, June 30, 2025
spot_imgspot_img
spot_imgspot_img

ಭಗವದ್ಗೀತೆ ಬೋಧನೆ; ಪ್ರಧಾನಿ ಮೋದಿ ಕಮಿಟ್ಮೆಂಟ್ ದೃಢವಾಗಿದೆ- ಮಾಜಿ ಪ್ರಧಾನಿ ದೇವೇಗೌಡ ಶ್ಲಾಘನೆ

- Advertisement -
- Advertisement -

ಹೊಳೆನರಸೀಪುರದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ರಾಜ್ಯದ ಪಠ್ಯಕ್ರಮದಲ್ಲಿ ಭಗವದ್ಗೀತೆ ಬೋಧನೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ್ದು, ಈಗಾಗಲೆ ಗುಜರಾತ್ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ಸೇರಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಏನು ಮಾಡುತ್ತಾರೊ ಗೊತ್ತಿಲ್ಲ. ಯಾವುದೋ ಒಂದು ವಿಚಾರ ಮನಸ್ಸಿನಲ್ಲಿ ಇಟ್ಟುಕೊಂಡು ಅವರು ಹೋಗುತ್ತಿದ್ದಾರೆ.

ಈ ಬಗ್ಗೆ ನಾನು ಏನೂ ಹೇಳಲ್ಲ, ಮಹಾಭಾರತ ಹತ್ತಾರು ಬಾರಿ ಓದಿದೀನಿ, ಆದರೆ ಭಗವದ್ಗೀತೆ ಪೂರ್ಣ ಓದಿಲ್ಲ. ನಮ್ಮ ಪ್ರಧಾನಿಗಳು ಬೇರೆ ದೇಶಗಳಿಗೆ ಹೋದಾಗ ಆ ದೇಶದ ನಾಯಕರಿಗೆ ಭಗವದ್ಗೀತೆ ಕೊಡುತ್ತಾರೆ. ನಮ್ಮ ದೇಶದ ಹಿನ್ನೆಲೆ ತಿಳಿಸುತ್ತಾರೆ, ಇದರ ಬಗ್ಗೆ ನಾನು ವಾದ ವಿವಾದ ಮಾಡಲ್ಲ. ಅವರು ವಿದೇಶಕ್ಕೆ ಹೋದಾಗ ಬೆಲೆಬಾಳುವ ಬೇರೆ ಯಾವುದಾದರೂ ವಸ್ತು ಕೊಂಡೊಯ್ಯಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ, ಅದು ಅವರ ಕಮಿಟ್ಮೆಂಟ್ ತೋರಿಸುತ್ತೆ ಎಂದು ಪರೋಕ್ಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಡೆಯನ್ನು ಶ್ಲಾಘಿಸಿದರು.

- Advertisement -

Related news

error: Content is protected !!