Friday, April 19, 2024
spot_imgspot_img
spot_imgspot_img

ಮಹೇಂದ್ರ ಸಿಂಗ್ ಧೋನಿ ಹೊಡೆದ ಸಿಕ್ಸರ್ ಸ್ಟೇಡಿಯಂ ಹೊರಕ್ಕೆ , ಕ್ರಿಕೆಟ್ ಅಭಿಮಾನಿಯೊಬ್ಬನಿಗೆ ಅತ್ಯಮೂಲ್ಯ ಬಹುಮಾನ.!

- Advertisement -G L Acharya panikkar
- Advertisement -

ಶಾರ್ಜಾ: ಮಂಗಳವಾರ ನಡೆದ ರೋಚಕ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಚೆನ್ನೈ ಸೂಪರ್ ಕಿಂಗ್ಸ್ ಸ್ವಲ್ಪ ರನ್ ಅಂತರದಲ್ಲಿ ಸೋತಿತ್ತು. ಈ ಪಂದ್ಯ ಚೆನ್ನೈ ಸೋತರು ಕೂಡ ಕ್ರಿಕೆಟ್ ಅಭಿಮಾನಿಯೊಬ್ಬನಿಗೆ ಈ ದಿನವನ್ನು ಎಂದೂ ಮರೆಯಲು ಸಾಧ್ಯವಿಲ್ಲ.

 ನಾಯಕ ಮಹೇಂದ್ರ ಸಿಂಗ್ ಧೋನಿ ಕೊನೆಯ ಓವರಿನಲ್ಲಿ ಬ್ಯಾಕ್ ಟು ಬ್ಯಾಕ್ ಹ್ಯಾಟ್ರಿಕ್ ಸಿಕ್ಸ್ ಹೊಡೆಯುವ ಮೂಲಕ ಸೋಲಿನ ಅಂತರವನ್ನು ಕಡಿಮೆಗೊಳಿಸಿದ್ದರು. ಈ ವೇಳೆ ಧೋನಿ ಹೊಡೆದ ಬರೋಬ್ಬರಿ 92 ಮೀಟರ್ ದೂರಕ್ಕೆ ಬಿದ್ದ ಚೆಂಡು ನೇರವಾಗಿ ಶಾರ್ಜಾ ಕ್ರಿಕೆಟ್ ಸ್ಟೆಡಿಯಂನ ಹೊರಕ್ಕೆ ಬಿದ್ದಿತ್ತು. ಅಲ್ಲೆ ಇದ್ದ ಅಭಿಮಾನಿಯೊಬ್ಬ ಕೂಡಲೇ ಮ್ಯಾಚ್ ಬಾಲ್ ಎತ್ತಿಕೊಂಡು ಹೊರನಡೆದಿದ್ದಾನೆ.

ಕೆಲವು ಪ್ರೇಕ್ಷಕರು ನೋಡನೋಡುತ್ತಿದ್ದಂತೆಯೇ ಮುಖದಲ್ಲಿ ಮಂದಹಾಸದೊಂದಿಗೆ ಅಭಿಮಾನಿ ಚೆಂಡನ್ನು ಎತ್ತಿಕೊಂಡು ಹೊರನಡೆದಿರುವುದು ಕ್ಯಾಮಾರದಲ್ಲಿ ರೆಕಾರ್ಡ್ ಆಗಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು  ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ವಿಡಿಯೋದಲ್ಲಿ ವೀಕ್ಷಕ ವಿವರಣೆಕಾರರು, ಈ ಚೆಂಡನ್ನು ಅಭಿಮಾನಿ ಖಂಡಿತ ಕೊಡುವುದಿಲ್ಲ. ಜೀವಮಾನದಲ್ಲಿ ಆತನಿಗೆ ಸಿಕ್ಕ ಅತ್ಯಮೂಲ್ಯ ಬಹುಮಾನವಿದು ಎಂದು ಹೇಳಿದ್ದಾರೆ.

- Advertisement -

Related news

error: Content is protected !!