- Advertisement -
- Advertisement -
ಯಕ್ಷಗಾನದ ತೆಂಕು ತಿಟ್ಟಿನ ಹೆಸರಾಂತ ಭಾಗವತರಾದ ಬಲಿಪ ನಾರಾಯಣ ಭಾಗವತ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಯಕ್ಷಗಾನ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ ಬಲಿಪ ನಾರಾಯಣ ಅವರು.
ಕುಂಬ್ಳೆ ಸೀಮೆಯ ಫಡ್ರೆ ಬಲಿಪ ನಾರಾಯಣ ಭಾಗವತರ ಹುಟ್ಟೂರು. ಮಾಧವ ಭಟ್ಟ ಸರಸ್ವತೀ ದಂಪತಿಗಳ 8 ಜನ ಮಕ್ಕಳಲ್ಲಿ ಹಿರಿಯವರು ಬಲಿಪ ನಾರಾಯಣ ಭಟ್ಟರು. ಇವರ ಭಾಗವತಿಕೆಗೆ ಅಜ್ಜ ಬಲಿಪ ನಾರಾಯಣ ಭಾಗವತರೇ ಮೊದಲ ಗುರುಗಳು.
ಕಟೀಲು ಮೇಳ, ಮೂಲ್ಕಿ ,ಕೂಡ್ಲು, ಭಗವತಿ ಮೇಳ ಸಸಿಹಿತ್ಲು ಮೇಳ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಮೇಳಗಳಲ್ಲಿ ಬಲಿಪ ಭಾಗವತರು ಸೇವೆ ಸಲ್ಲಿಸಿದ್ದಾರೆ.
- Advertisement -