Monday, May 6, 2024
spot_imgspot_img
spot_imgspot_img

ಮಂಗಳೂರು: ಕಾಣೆಯಾಗಿದ್ದ ಉಳ್ಳಾಲದ ವ್ಯಕ್ತಿ ಮಂಜೇಶ್ವರ ಕಡಲಿನಲ್ಲಿ ಶವವಾಗಿ ಪತ್ತೆ.!

- Advertisement -G L Acharya panikkar
- Advertisement -

ಮಂಗಳೂರು: ಕಳೆದ 26-09-2022ರಂದು ಕಾಣೆಯಾಗಿದ್ದ ಉಳ್ಳಾಲದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.

ಮೃತರನ್ನು ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಝಾಕಿರ್ (36) ಎಂದು ಗುರುತುಸಲಾಗಿದೆ. ಇವರು 26-09-2022ರಂದು ತೊಕ್ಕೊಟ್ಟಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟ್ಟಿದ್ದು ಮರಳಿ ಮನೆಗೆಬಾರದೆ ಕಾಣೆಯಾಗಿದ್ದರು.

ವಾರದ ಹಿಂದೆ ಮಂಜೇಶ್ವರ ಕಡಲಿನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಅಪರಿಚಿತ ಶವವಾಗಿದ್ದ ಕಾರಣ ಶವವನ್ನು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿತ್ತು. ಸಮುದ್ರದ 3- 4 ಕೀ.ಮೀ ದೂರದಲ್ಲಿ ಶವ ಸಿಕ್ಕಿದ್ದು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಪರಿಚಯಸ್ಥರು ಮಂಜೇಶ್ವರ ಅಥವಾ ಕುಂಬ್ಳೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು ಎನ್ನುವಂತೆ ಪ್ರಕಟಣೆ ಹೊರಡಿಸಲಾಗಿತ್ತು. ಒಂದು ವಾರದ ಬಳಿಕ ಮನೆಯವರಿಗೆ ವಿಷಯ ತಿಳಿದು ಶವವನ್ನು ಗುರುತು ಪತ್ತೆ ಹಚ್ಚಿದ್ದಾರೆ.

astr
- Advertisement -

Related news

error: Content is protected !!