Tuesday, April 30, 2024
spot_imgspot_img
spot_imgspot_img

ಮಂಗಳೂರು: ಫುಡ್ ಪಾಯ್ಸನ್; ಒಂದೇ ಕುಟುಂಬದ ನಾಲ್ವರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

- Advertisement -G L Acharya panikkar
- Advertisement -

ಮಂಗಳೂರು: ಆಹಾರ ಸೇವನೆಯ ಬಳಿಕ ಒಂದೇ ಕುಟುಂಬದ ನಾಲ್ವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಜೆಪ್ಪು ಬಪ್ಪಾಲ್‌ ನಿವಾಸಿಗಳಾದ ಗಣೇಶ್ (52), ಪಭಾವತಿ (45), ಅವರ ಮಕ್ಕಳಾದ ಸೌರಭ್ (20) ಮತ್ತು ಪ್ರತೀಕ್ (18) ಆಹಾರ ಸೇವನೆಯಿಂದ ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದಾರೆ.

ನಿನ್ನೆ ರಾತ್ರಿ ಮನೆಯಲ್ಲಿ ಹೆಸರು ಬೇಳೆ ತಿಂದು ಬಳಿಕ ಐಸ್ ಕ್ರೀಂ ಸೇವನೆ ಮಾಡಿ ಮಲಗಿದ್ದರು. ಆದರೆ, ಇಂದು ಬೆಳಗ್ಗೆ ಅವರು ಅಸ್ವಸ್ಥಗೊಂಡಿದ್ದಾರೆ. ಇಂದು ಬೆಳಗಾದರೂ ಬಾಗಿಲು ತೆರೆಯದ ಕಾರಣ ಅವರ ಸಂಬಂಧಿಗಳಾದ ಕೌಶಿಕ್, ಮಂಜುನಾಥ್, ಮತ್ತು ರೇಣುಕಾ ಎಂಬುವವರು ಮನೆಗೆ ಬಂದು ಬಾಗಿಲು ತೆಗಿಸಿದ್ದು, ವಾಂತಿ ಭೇದಿ ಮಾಡಿ ತೀವ್ರ ನಿತ್ರಾಣಗೊಂಡಿದ್ದ ನಾಲ್ವರನ್ನು ನಗರದ ಖಾಸಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ICU ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಲ್ವರ ಆರೋಗ್ಯ ಕೂಡ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!