- Advertisement -
- Advertisement -
ಮಂಗಳೂರು: ಆಟೋ ರಿಕ್ಷಾ ಸ್ಫೋಟವಾದ ಬೆನ್ನಲ್ಲೇ ಇದೀಗ ಬಿಜೈಯ KSRTC ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿ ಕೆಲ ಕಾಲ ಆತಂಕಕ್ಕೆ ಕಾರಣವಾದ ಘಟನೆ ಇಂದು ನಡೆದಿದೆ.
ಈ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆಗೆ ನಡೆಸಿತು. ತೀವ್ರ ಪರಿಶೀಲನೆ ಬಳಿಕ ಇದು ಪ್ರಯಾಣಿಕನೋರ್ವನ ಬ್ಯಾಗ್ ಅನ್ನೋದು ತಿಳಿದು ಬಂದಿದ್ದು, ಪೊಲೀಸರು ಮತ್ತು ಸಾರ್ವಜನಿಕರು ನಿರಾಳರಾದರು.
ನಾಗುರಿಯ ಘಟನೆ ಬಳಿಕ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದ್ದು, ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
- Advertisement -