Sunday, June 29, 2025
spot_imgspot_img
spot_imgspot_img

ಮಂಗಳೂರು: ಯಕ್ಷ ಸವ್ಯಸಾಚಿ, ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿಧಿವಶ!

- Advertisement -
- Advertisement -

ಮಂಗಳೂರು: ಯಕ್ಷಗಾನದಲ್ಲಿ ಭಾಗವತರು, ವೇಷಧಾರಿ, ಪ್ರಸಂಗಕರ್ತ ಸೇರಿದಂತೆ ಹಲವು ರಂಗದಲ್ಲಿ ಸವ್ಯಸಾಚಿ ಎಂದೇ ಪ್ರಸಿದ್ಧರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ (65) ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ನಿಧನರಾಗಿದ್ದಾರೆ.

ಮಂಗಳೂರು ತಾಲೂಕಿನ ಮಂಜನಾಡಿಯ ಬೊಟ್ಟಿಕೆರೆ ನಿವಾಸಿಯಾಗಿರುವ ಅವರು ದಿ. ಬಿ. ತ್ಯಾಂಪಣ ಪೂಂಜ ಮತ್ತು ಜಲಜಾ ಪೂಂಜ ದಂಪತಿ ಸುಪುತ್ರರಾಗಿದ್ದರು. ಬಿಎಸ್ಸಿ ಪದವೀಧರರಾದ ಅವರು ಆನೆಗುಂಡಿ ಗಣಪತಿ ಭಟ್ ಮತ್ತು ಹೊಸಹಿತ್ತು ಮಹಾಲಿಂಗಭಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳಲ್ಲಿ ಪರಿಣತರಾಗಿ ‘ಸವ್ಯಸಾಚಿ ಎನಿಸಿದರು.

ಅವರು ಸಮರ್ಥ ವೇಷಧಾರಿ, ನಿರ್ದೇಶಕ, ಚಂಡ ಮದ್ದಳೆ ವಾದಕ, ಭಾಗವತ ಮತ್ತು ಪ್ರಸಂಗಕರ್ತರಾಗಿದ್ದಾರೆ. ಮುಂಬಯಿ ಗೀತಾಂಬಿಕಾ, ಉಪ್ಪಳ ಭಗವತಿ, ಪುತ್ತೂರು, ಕರ್ನಾಟಕ ಮತ್ತು ಕಟೀಲು ಮೇಳಗಳಲ್ಲಿ 42 ವರ್ಷ ತಿರುಗಾಟ ಮಾಡಿರುವ ಪೂಂಜರು ಪ್ರಸ್ತುತ ಕಟೀಲು ಒಂದನೇ ಮೇಳದ ಪ್ರಧಾನ ಭಾಗವತರಾಗಿದ್ದಾರೆ.

‘ಅಂಬುರುಹ’ ಎಂಬ ಹೆಸರಿನಿಂದ ಅವರ 29 ಪ್ರಸಂಗಗಳನ್ನು ಯಕ್ಷಧ್ರುವ ಪಟ್ಟಿ ಫೌಂಡೇಶನ್ ಟ್ರಸ್ಟ್ ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಮಾರು 32 ಪ್ರಸಂಗಗಳನ್ನು ಅವರು ಬರೆದಿದ್ದಾರೆ.

ಮಾನಿಷಾದ ಇವರ ಅತಿ ಹೆಚ್ಚು ಹೆಗ್ಗಳಿಕೆ ಪಡೆದ ಪ್ರಸಂಗ, ಉಳಿದಂತೆ ನಳಿನಾಕ್ಷಿ ನಂದಿನಿ, ಉಭಯಕುಲ ಬಿಲ್ಲೋಜ, ಮೇಘ ಮಯೂರಿ, ಸ್ವರ್ಣನೂಪುರ (ಕನ್ನಡ) ಕುಡಿಯನ ಕೊಂಬಿರೆಲ್, ದಳವಾಯಿ ಮುದ್ದಣೆ, ಗರುಡಕೇಂಜವೆ, ಪಟ್ಟದಕತ್ತಿ, ಕುಡಿಯನ ಕಣ್ಣ್, ಸ್ವರ್ಣ ಕೇದಗೆ (ತುಳು) ಪ್ರಸಂಗಗಳು ವೃತ್ತಿ ಮೇಳಗಳಲ್ಲಿ ಪ್ರಯೋಗಗೊಂಡು ಜನಪ್ರಿಯವಾಗಿವೆ.

- Advertisement -

Related news

error: Content is protected !!