Sunday, April 28, 2024
spot_imgspot_img
spot_imgspot_img

ಮಂಗಳೂರು: ರಾಷ್ಟ್ರಭಕ್ತ ನಾಗರೀಕ ವೇದಿಕೆ ವತಿಯಿಂದ ಮೃತಪಟ್ಟ ಎರಡು ಕುಟುಂಬಗಳಿಗೆ ಸಾಂತ್ವನ ಮತ್ತು ಚೆಕ್‌ ವಿತರಣೆ

- Advertisement -G L Acharya panikkar
- Advertisement -

ಮಂಗಳೂರು: ಅನೇಕ ಸೈನಿಕರ ಕಷ್ಟಕ್ಕೆ ಹೆಗಲು ಕೊಟ್ಟ ರಾಷ್ಟ್ರಭಕ್ತ ನಾಗರೀಕ ವೇದಿಕೆ ವತಿಯಿಂದ ಹೃದಯಾಘಾತದಿಂದ ಮೃತಪಟ್ಟ ಎರಡು ಯೋಧ ಕುಟುಂಬಗಳಿಗೆ ಚೆಕ್‌ ವಿತರಣಾ ಕಾರ್ಯಕ್ರಮ ನಡೆಯಿತು.

ಭೋಪಾಲ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಯೋಧ ಮುರಳೀಧರ್‌ ಹಾಗೂ ಹೃದಯಾಘಾತದಿಂದ ಮೃತಪಟ್ಟ ಯೋಧ ಕುಲಶೇಖರ್‌ ನಿವಾಸಿ ಹರೀಶ್‌ ಕುಮಾರ್‌ರವರ ಕುಟುಂಬಗಳಿಗೆ ರಾಷ್ಟ್ರಭಕ್ತ ನಾಗರೀಕ ವೇದಿಕೆಯ ಪರವಾಗಿ 25,000- ಮೊತ್ತದ ಚೆಕ್‌ ವಿತರಿಸಿ, ಮುಂದೆಯೂ ನಿಮ್ಮ ಕುಟುಂಬದ ಜೊತೆ ನಾವಿದ್ದೇವೆ ಎಂದು ಸಾಂತ್ವನ ಹೇಳಿದ್ದರು.

ಈ ಸಂದರ್ಭದಲ್ಲಿ ರಾಷ್ಟ್ರಭಕ್ತ ನಾಗರೀಕ ವೇದಿಕೆಯ ಅಧ್ಯಕ್ಷರಾದ ಸತ್ಯಜಿತ್‌ ಸುರತ್ಕಲ್‌, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಮತ್ತು ಮಾಜಿ ಯೋಧರು ಉಪಸ್ಥಿತರಿದ್ದರು.

- Advertisement -

Related news

error: Content is protected !!