ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆ ಸ್ನಾತಕೋತ್ತರ ಪದವಿಧರೆ ಹರ್ಷಿತಾ ಕೆ.ಆರ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. “ಹೊಸ ಚಾಲ್ಕೋನ್ ಉತ್ಪನ್ನಗಳ ಮತ್ತು ಅವುಗಳ ನ್ಯಾನೊಕಾಂಪೊಸಿಟ್ಗಳ ಅನ್ವಯದ ಅಧ್ಯಯನ” ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು.
ಮ0ಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಮಾರ್ಗದರ್ಶಿ ಪ್ರೊ.ಬಿ ಕೆ ಸರೋಜಿನಿ ಇವರ ಮೇಲ್ವಿಚಾರಣೆಯಲ್ಲಿ ಅಧ್ಯಯನ ನಡೆಸಿದ್ದರು. ಹರ್ಷಿತಾ ಕೆ.ಆರ್ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾಣಿನಗರ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರಿನಲ್ಲಿ ನಡೆಸಿದ್ದು, ನಿವೃತ್ತ ಶಿಕ್ಷಕಿ ಕಿಶೋರಿ. ಕೆ ಮತ್ತು ದಿ.ರಾಮಚಂದ್ರ ಕೆ ದಂಪತಿಯ ಪುತ್ರಿಯಾಗಿದ್ದು, ಸಂತೋಷ್.ಕೆ ಇವರ ಧರ್ಮಪತ್ನಿಯಾಗಿರುತ್ತಾರೆ.
ಪ್ರೌಢ ಶಿಕ್ಷಣವನ್ನು ರಾಮಕೃಷ್ಣ ಪ್ರೌಢಶಾಲೆ ಪುತ್ತೂರು, ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು, ಪದವಿ ಶಿಕ್ಷಣವನ್ನು ಆಳ್ವಾಸ್ ಕಾಲೇಜು ಮೂಡುಬಿದಿರೆ, ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯಲ್ಲಿ ಪೂರೈಸಿದ್ದಾರೆ.