- Advertisement -
- Advertisement -
ಮಂಗಳೂರು: ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಮಂಗಳೂರು ನಗರದ ಎಕ್ಕೂರು ಬಳಿ ಸಂಭವಿಸಿದೆ.
ಎಕ್ಕೂರಿನಲ್ಲಿ ಹಾದು ಹೋಗಿರುವ ರೈಲ್ವೇ ಹಳಿಯಲ್ಲಿ ಇಂದು ಬೆಳಗ್ಗೆ 10.45ರ ವೇಳೆಗೆ ಮುಂಬೈಗೆ ಸಂಚರಿಸುತ್ತಿದ್ದ ಮತ್ಸ್ಯ ಗಂಧ ಎಕ್ಸ್ಪ್ರೆಸ್ ರೈಲು ಈತನಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.
ಕಿವಿಯಲ್ಲಿ ಇಯರ್ ಫೋನ್ ಇದ್ದು, ರೈಲು ಬರುವ ಸದ್ದು ಕೇಳದೆ ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ. ರೈಲ್ವೇ ಪೊಲೀಸರಿಂದ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ಕೊರಳಿನಲ್ಲಿ ಕ್ರೈಸ್ತರ ಜಪಮಾಲೆ ಕಂಡುಬಂದ್ದು, ವ್ಯಕ್ತಿಯ ಗುರು ಪತ್ತೆಯಾಗಿಲ್ಲ.
- Advertisement -