- Advertisement -
- Advertisement -
ಮಂಗಳೂರು : ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿರುವ ಹಿನ್ನಲೆಯಲ್ಲಿ ತಡರಾತ್ರಿ ಕಾಂಗ್ರೆಸ್ ತನ್ನ ಕೊನೆಯ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದು ಇನಾಯತ್ ಅಲಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ನಿಂದ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಮೊಯಿದ್ದೀನ್ ಬಾವಾ ಜೆಡಿಎಸ್ನಿಂದ ಸ್ಪರ್ಧೆ ಮಾಡುವ ನಿರ್ಧಾರ ಘೋಷಿಸಿದ್ದಾರೆ. ಬಾವಾ ಮಂಗಳೂರು ಉತ್ತರದಲ್ಲಿ ಸ್ಪರ್ಧೆ ಮಾಡುವುದರಿಂದ ಕಾಂಗ್ರೆಸ್ಗೆ ಈ ಬಾರಿ ಮತ ವಿಭಜನೆಯ ಕಂಟಕ ಎದುರಾಗಲಿದೆ.
ನಿನ್ನೆ ಕಾಂಗ್ರೆಸ್ ತನ್ನ ಆರನೇ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಶಿಡ್ಲಘಟ್ಟದಿಂದ ಬಿ.ವಿ ರಾಜೀವ ಗೌಡ, ಸರ್ ಸಿವಿ ರಾಮನ್ ನಗರದಿಂದ ಎಸ್ ಆನಂದಕುಮಾರ್, ರಾಯಚೂರು ನಗರದಿಂದ ಮೊಹಮದ್ ಶಲಾಮ್, ಅರಕಲಗೂಡಿನಿಂದ ಹೆಚ್ಪಿ ಶ್ರೀಧರ ಗೌಡ, ಮಂಗಳೂರು ಉತ್ತರದಿಂದ ಇನಾಯತ್ ಅಲಿಗೆ ಟಿಕೆಟ್ ನೀಡಿದೆ.
- Advertisement -