Thursday, May 2, 2024
spot_imgspot_img
spot_imgspot_img

ಮಂಗಳೂರು: ಹಸ್ತ ಕೂಟ ತೊರೆದು ತೆನೆ ಹೊತ್ತ ಕರಾವಳಿಯ ಮತ್ತೋರ್ವ ನಾಯಕ; ಕುಮಾರಣ್ಣನತ್ತ ಮೊಯ್ದೀನ್ ಬಾವಾ ಒಲವು..! ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಕೆ

- Advertisement -G L Acharya panikkar
- Advertisement -

ಮಂಗಳೂರು : ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿರುವ ಹಿನ್ನಲೆಯಲ್ಲಿ ತಡರಾತ್ರಿ ಕಾಂಗ್ರೆಸ್​ ತನ್ನ ಕೊನೆಯ ಪಟ್ಟಿಯನ್ನು ರಿಲೀಸ್​ ಮಾಡಿದೆ. ಈ ಪಟ್ಟಿಯಲ್ಲಿ ಮಾಜಿ ಶಾಸಕ ಮೊಯಿದ್ದೀನ್​ ಬಾವಾಗೆ ಕಾಂಗ್ರೆಸ್​ ಟಿಕೆಟ್​ ಕೈ ತಪ್ಪಿದ್ದು ಇನಾಯತ್​ ಅಲಿಗೆ ಟಿಕೆಟ್​ ನೀಡಲಾಗಿದೆ.

ಕಾಂಗ್ರೆಸ್​ನಿಂದ ಟಿಕೆಟ್ ಮಿಸ್​ ಆದ ಬೆನ್ನಲ್ಲೇ ಮೊಯಿದ್ದೀನ್​ ಬಾವಾ ಜೆಡಿಎಸ್​ನಿಂದ ಸ್ಪರ್ಧೆ ಮಾಡುವ ನಿರ್ಧಾರ ಘೋಷಿಸಿದ್ದಾರೆ. ಬಾವಾ ಮಂಗಳೂರು ಉತ್ತರದಲ್ಲಿ ಸ್ಪರ್ಧೆ ಮಾಡುವುದರಿಂದ ಕಾಂಗ್ರೆಸ್​ಗೆ ಈ ಬಾರಿ ಮತ ವಿಭಜನೆಯ ಕಂಟಕ ಎದುರಾಗಲಿದೆ.

ನಿನ್ನೆ ಕಾಂಗ್ರೆಸ್​​ ತನ್ನ ಆರನೇ ಪಟ್ಟಿಯನ್ನು ರಿಲೀಸ್​ ಮಾಡಿದ್ದು, ಶಿಡ್ಲಘಟ್ಟದಿಂದ ಬಿ.ವಿ ರಾಜೀವ ಗೌಡ, ಸರ್​ ಸಿವಿ ರಾಮನ್​ ನಗರದಿಂದ ಎಸ್​ ಆನಂದಕುಮಾರ್​, ರಾಯಚೂರು ನಗರದಿಂದ ಮೊಹಮದ್​ ಶಲಾಮ್​, ಅರಕಲಗೂಡಿನಿಂದ ಹೆಚ್​ಪಿ ಶ್ರೀಧರ ಗೌಡ, ಮಂಗಳೂರು ಉತ್ತರದಿಂದ ಇನಾಯತ್​ ಅಲಿಗೆ ಟಿಕೆಟ್​ ನೀಡಿದೆ.

- Advertisement -

Related news

error: Content is protected !!