Monday, April 29, 2024
spot_imgspot_img
spot_imgspot_img

ಮಂಜೇಶ್ವರ: ಮದುವೆಗೆಂದು ಗಲ್ಫ್‌ನಿಂದ ಬಂದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

- Advertisement -G L Acharya panikkar
- Advertisement -

ಮಂಜೇಶ್ವರ: ಕಾರಿನಲ್ಲಿ ಕುಳಿತಲ್ಲಿಯೇ ಹೃದಯಾಘಾತಕ್ಕೊಳಗಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವರ್ಕಾಡಿಯಲ್ಲಿ ನಡೆದಿದೆ.

ವರ್ಕಾಡಿ ನಲ್ಲೆಂಗಿಪದವು ನಿವಾಸಿ ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಸಾಜಿದ್ (38) ಮೃತ ವ್ಯಕ್ತಿ. ರೆಹಮಾನ್ ಸಾಹಿಬ್- ನೂರ್ ಬಾನ್ ದಂಪತಿಗಳ ಪುತ್ರನಾಗಿರುವ ಸಾಜಿದ್ ಗಲ್ಫ್‌ನಲ್ಲಿ ಉದ್ಯೋಗಿಯಾಗಿದ್ದು, ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಕೆಲ ವಾರಗಳ ಹಿಂದೆ ಊರಿಗೆ ಆಗಮಿಸಿದ್ದರು.

ಸೋಮವಾರ ಮುಂಬೈಯಲ್ಲಿ ನಡೆಯುವ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದು, ಮದುವೆ ಸಮಾರಂಭ ಮುಗಿಸಿ ಮುಂಬೈಯಿಂದಲೇ ಗಲ್ಫ್ ತೆರಳಲು ನಿರ್ಧರಿಸಿದ್ದರು. ಬೆಳಗ್ಗೆ ತಾಯಿ ಜೊತೆ ಮಜೀರ್ಪಲ್ಲ ಪೇಟೆಗೆ ತನ್ನ ಕಾರಿನಲ್ಲಿ ಬಂದು ಸಾಮಗ್ರಿ ಪಡೆದು ಬ್ಯಾಂಕ್ ಗೆಂದು ತೆರಳಿದ್ದರು. ಈ ವೇಳೆ ತಲೆ ನೋವೆಂದು ತಾಯಿಯಲ್ಲಿ ತಿಳಿಸಿ ಕಾರಿನಲ್ಲಿ ಬಂದು ಕುಳಿತ ಸಾಜಿದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ತಂದೆ – ತಾಯಿ, ಪತ್ನಿ ಹಾಗೂ ಎರಡು ಹೆಣ್ಣು, ಒಂದು ಗಂಡು ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!