Saturday, June 28, 2025
spot_imgspot_img
spot_imgspot_img

ಮಕ್ಕಳಿಗೆ ವಾಹನ ಕೊಡುವ ಮುನ್ನ ಎಚ್ಚರ; ಮಗಳು ಮಾಡಿದ ಅಪಘಾತಕ್ಕೆ ತಂದೆಗೆ ಶಿಕ್ಷೆ

- Advertisement -
- Advertisement -
vtv vitla
vtv vitla
vtv vitla
vtv vitla

ಮಡಿಕೇರಿ: ಬಾಲಕಿ ವಾಹನ ಚಾಲನೆ ಮಾಡಿದ ಅಪಘಾತ ನಡೆದಿದೆ. ಆಕೆ ಇನ್ನೂ ಕೂಡ ಅಪ್ರಾಪ್ತೆ. ಹೀಗಿರುವಾಗ ಕೋರ್ಟ್ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ ದಂಡ ಹಾಗೂ ಶಿಕ್ಷೆಯನ್ನು ವಿಧಿಸಿದೆ. ಬಾಲಕಿಯ ತಂದೆಗೆ ಶಿಕ್ಷೆ ನೀಡಲಾಗಿದೆ..!

ಕುಶಾಲನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನಂಜರಾಯಪಟ್ಟಣದಲ್ಲಿ ಜನವರಿ 6 ರಂದು ಅಪಘಾತ ಸಂಭವಿಸಿತ್ತು. ಬಾಲಕಿ ವಾಹನ ಚಾಲನೆ ಮಾಡಿ ಅಪಘಾತ ಉಂಟಾಗಿದ್ದರಿ0ದ ಆಕೆಯ ಪೋಷಕರಿಗೆ 25,000 ರೂ. ದಂಡ ಮತ್ತು ಒಂದು ದಿನದ ಸಜೆ ವಿಧಿಸಲಾಗಿದೆ.

ದುಬಾರೆ ಜಂಕ್ಷನ್ ನಲ್ಲಿ ಬೈಕ್ ಮತ್ತು ಸ್ಕೂಟಿ ನಡುವೆ ಅಪಘಾತ ಉಂಟಾಗಿದ್ದ ಪ್ರಕರಣದಲ್ಲಿ ನಂಜರಾಯಪಟ್ಟಣದ ಅಂತೋಣಿಯವರ 16 ವರ್ಷದ ಪುತ್ರಿ ದ್ವಿಚಕ್ರ ವಾಹನ ಚಾಲನೆ ಮಾಡಿದ್ದರು. ಕುಶಾಲನಗರ ಜೆ.ಎಂ.ಎಫ್.ಸಿ. ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದ್ದು, ಬಾಲಕಿಯ ತಂದೆಗೆ 25 ಸಾವಿರ ರೂಪಾಯಿ ದಂಡ ಹಾಗೂ ಒಂದು ದಿನ ಸಜೆ ವಿಧಿಸಿ ತೀರ್ಪು ನೀಡಲಾಗಿದೆ.

vtv vitla
vtv vitla
vtv vitla
vtv vitla
vtv vitla
vtv vitla
- Advertisement -

Related news

error: Content is protected !!