Thursday, May 2, 2024
spot_imgspot_img
spot_imgspot_img

ಮಣಿಪಾಲ: ಬಸ್‌ನಿಂದ ಇಳಿಯುವಾಗ ನಿಯಂತ್ರಣ ತಪ್ಪಿ ಬಿದ್ದು ಯುವಕ ಮೃತ್ಯು

- Advertisement -G L Acharya panikkar
- Advertisement -

ಮಣಿಪಾಲ: ಉಡುಪಿ ಕಡೆಯಿಂದ ಮೂಡುಬೆಳ್ಳೆ ಕಡೆಗೆ ಹೋಗುವ ಖಾಸಗಿ ಬಸ್ಸೊಂದು ಅಲೆವೂರು ರಾಂಪುರ ದೇವಸ್ಥಾನದ ಗೋಪುರದ ಬಳಿ ಪ್ರಯಾಣಿಕರು ಇಳಿಯುವಾಗ ಚಾಲಕ ಬಸ್‌ ಅನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಪ್ರಯಾಣಿಕನೊರ್ವ ಗಂಭೀರ ಗಾಯಗೊಂಡು ಮೃತ ಘಟನೆ ಸಂಭವಿಸಿದೆ.

ಜಾರ್ಖಂಡ್‌ ರಾಜ್ಯದ ನಿವಾಸಿ ಮಂಜಯ್‌ ಕುಮಾರ್‌ (19) ಮೃತಪಟ್ಟ ಯುವಕ. ಬಸ್‌ ಮುಂದಕ್ಕೆ ಚಲಿಸಿದ ಪರಿಣಾಮ ನಿಯಂತ್ರಣ ತಪ್ಪಿ ಬಿದ್ದ ಮಂಜಯ್‌ ಕುಮಾರ್‌ ಗಂಭೀರ ಗಾಯವಾಗಿದ್ದು, ಕೂಡಲೇ ಆತನನ್ನು ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸ್‌ ಅನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!