ಹೆಂಡತಿ ಹಿಂದೆ ಬಿದ್ದಿದ್ದ ಪಗಾಲ್ ಪ್ರೇಮಿಯನ್ನು ಪತಿರಾಯ ಕೊಂದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಜಾವದ್ ಕೊಲೆಯಾದವ. ಕೊಲೆಗೈದ ಆರೋಪದಡಿ ಶಿವಾಜಿನಗರ ಪೊಲೀಸರು ಜಿಷಾನ್ ಎಂಬಾತನನ್ನು ಬಂಧಿಸಿದ್ದಾರೆ.
ಜಾವದ್ ಎಂಬ ಪಾಗಲ್ ಪ್ರೇಮಿ ತನ್ನ ಲವರ್ ಗೆ ಮದುವೆಯಾಗಿದ್ರು ಸಹ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಈ ಹಿನ್ನೆಲೆ ಆರೋಪಿ ಜಿಷಾನ್ ಹೆಂಡತಿ ಸಹವಾಸಕ್ಕೆ ಬರದಂತೆ ಎಚ್ಚರಿಕೆ ನೀಡಿದ್ದ. ಆದರೆ ತನ್ನ ಅದೇ ಚಾಳಿ ಮುಂದುವರೆಸಿದ್ದ ಜಾವದ್ ತಡರಾತ್ರಿ ಜಿಷಾನ್ ಮನೆ ಬಳಿ ಹೋಗಿ ಮತ್ತೆ ಗಲಾಟೆ ಶುರು ಮಾಡಿ ಮಾಜಿ ಪ್ರೇಯಸಿಗೆ ಲವ್ ಮಾಡು ಅಂತಾ ದುಂಬಾಲು ಬಿದ್ದಿದ್ದ ಎನ್ನಲಾಗಿದೆ.
ಈ ಗಲಾಟೆ ಅತಿರೇಕಕ್ಕೆ ಹೋಗಿ ಜಿಷಾನ್ ಜಾವದ್ ನ ಕುತ್ತಿಗೆ ಭಾಗಕ್ಕೆ ಕತ್ತರಿಯಿಂದ ಇರಿದಿದ್ದ. ತೀವ್ರ ರಕ್ತ ಸ್ರಾವದಿಂದ ಆಸ್ಪತ್ರೆಗೆ ತೆರಳಿ ಪ್ರಾಣ ಉಳಿಸುವಂತೆ ವೈದ್ಯರ ಬಳಕ ಬೇಡಿಕೊಂಡಿದ್ದ. ಆದರೆ ಚಿಕಿತ್ಸೆ ನೀಡುವ ವೇಳೆಗೆ ಜಾವದ್ ಮೃತಪಟ್ಟಿದ್ದ. ಇತ್ತ ಕೊಲೆ ಮಾಡಿದ್ದ ಜಿಷಾನ್ ನಾನು ಕೊಲೆ ಮಾಡಿಲ್ಲ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದ. ಕೊನೆಗೆ ತಮ್ಮದೇ ಸ್ಟೈಲಲ್ಲಿ ವಿಚಾರಿಸಿದ ಪೊಲೀಸರ ಮುಂದೆ ಜಿಷಾನ್ ತಪ್ಪೊಪ್ಪಿಕೊಂಡು ಈಗ ಜೈಲು ಸೇರಿದ್ದಾನೆ.