Friday, May 17, 2024
spot_imgspot_img
spot_imgspot_img

ಮಧುಮೇಹ, ಬಿಪಿ ನಿಯಂತ್ರಣಕ್ಕೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 3 ಎಲೆಗಳನ್ನು ಜಗಿಯಿರಿ

- Advertisement -G L Acharya panikkar
- Advertisement -

ಮಧುಮೇಹ ಮತ್ತು ಬಿಪಿ ಇತ್ತೀಚೆಗೆ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಈ ಮೂರು ಎಲೆಗಳು ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ ನೋಡಿ.

ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಮೊದಲು ಮಾಡಬೇಕಾಗಿರುವ ಕೆಲಸವೇ ಆಹಾರ ಶೈಲಿ ಮತ್ತು ಜೀವನಶೈಲಿಯ ಬದಲಾವಣೆ. ದಿನನಿತ್ಯದ ಬದುಕಿನಲ್ಲಿ ಒಂದಷ್ಟು ಮಾರ್ಪಾಡುಗಳನ್ನು, ಹೊಸ ಅಭ್ಯಾಸಗಳನ್ನು ಸೇರಿಸಿಕೊಂಡರೆ ಮಧುಮೇಹವನ್ನು ನಿಯಂತ್ರಿಸಬಹುದು.

vtv vitla
vtv vitla

ಮೇದೋಜ್ಜೀರಕ ಗ್ರಂಥಿಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಇನ್ಸುಲಿನ್ ಹಾರ್ಮೋನ್ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ ಅಥವಾ ನಿಲ್ಲಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರೋಗಿಯ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ, ಇದರಿಂದಾಗಿ ಅನೇಕ ಗಂಭೀರ ಸಮಸ್ಯೆಗಳ ಅಪಾಯವಿದೆ. ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇದೇ ವೇಳೆ ರಕ್ತದೊತ್ತಡವೂ ಏರಿಕೆಯಾಗುವುದು ಸಾಮಾನ್ಯ. ಇದರಿಂದ ತಲೆನೋವು, ವಾಂತಿ, ಹೃದಯ ಸಂಬಂಧೀ ಕಾಯಿಲೆಗಳು ಕಾಡಲಾರಂಭಿಸುತ್ತವೆ. ಇವೆಲ್ಲದರ ನಿಯಂತ್ರಣಕ್ಕೆ ಸಾಕಷ್ಟು ಔಷಧಗಳಿವೆ ಆದರೆ ದಿನಚರಿಯಿಂದಲೇ ಇವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಆ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಪ್ರತಿದಿನ ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಜಗಿದರೆ ಮಧುಮೇಹ ಮತ್ತು ರಕ್ತದೊತ್ತಡ ಎರಡೂ ಕೂಡ ನಿಯಂತ್ರದಲ್ಲಿರುತ್ತದೆ. ಅವು ಯಾವುವು ಎಂದು ಇಲ್ಲಿದೆ ನೋಡಿ.

​ಕರಿಬೇವಿನ ಎಲೆಗಳು

ಆಹಾರ ಪದಾರ್ಥಗಳ ರುಚಿಯನ್ನು ಮಾತ್ರವಲ್ಲ ಅನೇಕ ಆರೋಗ್ಯ ಸಮಸ್ಯೆಗಳಿಗೂ ಕರಿಬೇವು ಉತ್ತಮ ಮದ್ದಾಗಿದೆ. ಇದನ್ನು ಸಿಹಿ ಬೇವು ಎಂತಲೂ ಕರೆಯುತ್ತಾರೆ. ಈ ಕರಿಬೇವಿನ ಎಲೆಯ ಸೇವನೆಯಿಂದ ಜೀರ್ಣಶಕ್ತಿಯೂ ಉತ್ತಮವಾಗುತ್ತದೆ ಜೊತೆಗೆ ಮಧುಮೇಹವೂ ನಿಯಂತ್ರಣಕ್ಕೆ ಬರುತ್ತದೆ. ಈ ಕರಿಬೇವಿನಲ್ಲಿ ಪ್ರೋಟೀನ್‌, ಫೈಬರ್‌, ಮಿನರಲ್ಸ್‌, ಕ್ಯಾಲ್ಸಿಯಂ, ವಿಟಮಿನ್‌ ಸಿ, ಕಾಪರ್‌ ಮತ್ತು ಜಿಂಕ್‌ ಅಂಶಗಳು ಅಡಕವಾಗಿದೆ. ಇವುಗಳು ಆರೋಗ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ.

​ಕರಿಬೇವಿನ ಬಳಕೆ ಹೇಗೆ

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಕರಿಬೇವಿನ ಎಲೆಯನ್ನು ಜಗಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
ಆಹಾರಗಳನ್ನು ತಯಾರಿಸುವಾಗ ಕರಿಬೇವಿನ ಎಲೆಗಳನ್ನು ಉಪಯೋಗಿಸಿ. ಇದರಿಂದ ಹಸಿ ಎಲೆಯನ್ನು ತಿನ್ನುವ ಕಷ್ಟದಿಂದ ಮುಕ್ತಿ ಪಡೆಯಬಹುದು.
ಈ ಕರಿಬೇವಿನ ಬಳಕೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚು ಮಾಡಿ ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ.

​ತುಳಸಿ ಎಲೆಗಳು

ತುಳಸಿಯನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ. ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳ ಸೇವನೆಯು ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ಜನರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ತುಳಸಿ ಎಲೆಗಳು ಲಿಪಿಡ್‌ಗಳನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ, ರಕ್ತದ ಕೊರತೆ, ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆದರೆ ಇದರ ಅತಿಯಾದ ಬಳಕೆ ಬೇಡ ಏಕೆಂದರೆ ಇದು ದೇಹದಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುತ್ತದೆ.

​ತುಳಸಿ ಎಲೆಗಳನ್ನು ಹೀಗೆ ಬಳಸಿ

ಬೆಳಿಗ್ಗೆ ತುಳಸಿ ಎಲೆಗಳನ್ನು ಜಗಿಯುವುದು ಬಿಪಿ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಉತ್ತಮ ಮಾರ್ಗವಾಗಿದೆ. ಈ ಎಲೆಗಳ ರಸವನ್ನು ತೆಗೆದು ಸ್ವಲ್ಪ ನೀವು ಕುಡಿಯಬಹುದು. ತುಳಸಿ ಎಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ.

​ಕಹಿಬೇವಿನ ಎಲೆಗಳು

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕಹಿ ಬೇವು ಮತ್ತು ಕರಿ ಬೇವು ಎರಡೂ ಬೇರೆ ಬೇರೆ. ಅಡುಗೆಗಳಲ್ಲಿ ಬಳಸುವುದು ಕರಿಬೇವು. ಯುಗಾದಿಯಲ್ಲಿ ಬೇವು ಬೆಲ್ಲ ಮಾಡಲು ಬಳಸುವುದು ಕಹಿ ಬೇವು. ಆದ್ದರಿಂದ ಎರಡೂ ಕೂಡ ವಿಭಿನ್ನ ರೀತಿಯ ಆರೋಗ್ಯ ಗುಣಗಳನ್ನು ಹೊಂದಿದೆ. ಈ ಎಲೆಗಳನ್ನು ಜ್ವರ, ಹಲ್ಲುನೋವು, ಹೊಟ್ಟೆ ನೋವು ಸೇರಿದಂತೆ ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆಯಿಂದ ಗುಣಮುಖರಾಗಲೂ ಕೂಡ ಬಳಸುತ್ತಾರೆ. ಹೀಗಾಗಿ ನಿಮಗೆ ಮಧುಮೇಹ ಅಥವಾ ಬಿಪಿ ಸಮಸ್ಯೆ ಇದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಹಿ ಬೇವಿನ ಒಂದು ಎಲೆಯನ್ನು ಜಗಿರಿಯಿರಿ.

​ಹೀಗೂ ಬಳಕೆ ಮಾಡಿ

ಬೇವಿನ ಎಲೆಗಳ ಆಂಟಿಹಿಸ್ಟಮೈನ್ ಪರಿಣಾಮಗಳು ರಕ್ತನಾಳಗಳನ್ನು ಹಿಗ್ಗಿಸಲು ಕಾರಣವಾಗಬಹುದು. ಈ ಕಾರಣದಿಂದಾಗಿ ಈ ಎಲೆಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ತಿಂಗಳ ಕಾಲ ಬೇವಿನ ಸಾರ ಅಥವಾ ಕ್ಯಾಪ್ಸುಲ್ಗಳನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಮಧುಮೇಹ ನಿಯಂತ್ರಣಕ್ಕೂ ಇದು ಬೆಸ್ಟ್‌ ಆಯ್ಕೆಯಾಗಿದೆ.

- Advertisement -

Related news

error: Content is protected !!