ವಿಟ್ಲ : ಮಾಣಿ, ಪೆರಾಜೆಯಲ್ಲಿ ನಿರ್ಮಾಣಗೊಂಡ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ನೂತನ ಸಂಕೀರ್ಣದಲ್ಲಿ ಮಾರ್ಚ್ 03ರ ಶುಕ್ರವಾರದಂದು ವಾಸ್ತು ಪೂಜೆ ಹಾಗೂ ವಾಸ್ತು ರಕ್ಷೋಘ್ನ ಹೋಮವು ಜರುಗಿತು. ಹಾಗೆಯೇ ಮಾರ್ಚ್ 4ರ ಶನಿವಾರದಂದು ಸಕಲ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಗಣ ಹೋಮ ಹಾಗೂ ಸತ್ಯನಾರಾಯಣ ದೇವರಪೂಜೆಯು ನೆರವೇರಿತು. ಈ ಎರಡೂ ದಿನಗಳ ಎಲ್ಲಾ ಪೂಜಾ ವಿಧಿ -ವಿಧಾನಗಳು ವೈದಿಕರಾದ ವೇದಮೂರ್ತಿ ಅನಂತ ಭಟ್ ಕಶೆಕೋಡಿ ಇವರ ನೇತೃತ್ವದಲ್ಲಿ ನೆರವೇರಿತು. ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರಿಂದ ಭಜನಾ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮಗಳಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕ ಪ್ರಹ್ಲಾದ್ ಜೆ.ಶೆಟ್ಟಿ, ಉಪಾಧ್ಯಕ್ಷಯತಿರಾಜ್ ಕೆ.ಎನ್, ಕಾರ್ಯದರ್ಶಿ ಮಹೇಶ್ ಜೆ.ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಸುಭಾಷಿಣಿ ಎ.ಶೆಟ್ಟಿ ಹಾಗೂ ಜಯಲಕ್ಷ್ಮೀ ಎನ್. ಪೈ ಪಾಲ್ಗೊಂಡಿದ್ದರು.
ಶಾಲಾ ಆಡಳಿತಾಧಿಕಾರಿ ರವೀಂದ್ರ ಡಿ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ. ಶೆಟ್ಟಿ, ಬಾಲವಿಕಾಸ ಶಾಲೆಯ ನೂತನ ಕಟ್ಟಡ ನಿರ್ಮಾಣ ಸಂಸ್ಥೆಯಾದ ಯಮುನಾ ಬಿಲ್ಡರ್ಸ್ ಮಾಲಕ ಪುರುಷೋತ್ತಮ್ ಶೆಟ್ಟಿ, ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಊರ- ಪರವೂರ ಮಹನೀಯರು ಮತ್ತು ಸಂಸ್ಥೆಯ ಹಿತೈಷಿಗಳು ಪಾಲ್ಗೊಂಡು ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.