Wednesday, May 8, 2024
spot_imgspot_img
spot_imgspot_img

ಮುಲ್ಕಿ: ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ; ನಾಲ್ವರ ಸ್ಥಿತಿ ಗಂಭೀರ

- Advertisement -G L Acharya panikkar
- Advertisement -
astr

ಮುಲ್ಕಿ: ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ ನಡೆಸಿ, ಗಂಭೀರ ಗಾಯಗೊಂಡ ಘಟನೆ ಮುಲ್ಕಿಯ ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಸೇತುವೆ ಬಳಿ ನಡೆದಿದೆ.

ಗಾಯಗೊಂಡವರನ್ನು ಮೂಡಬಿದ್ರೆ ಸಾಣೂರು ನಿವಾಸಿ ನಿತಿನ್ (24),ಮೂಡು ಮಾರ್ನಾಡು ವಿಶ್ವ ನಾಥ ಪೂಜಾರಿ ( 47), ಧರೆಗುಡ್ಡೆ ನಿವಾಸಿಗಳಾದ ಉಮೇಶ್ ಶೆಟ್ಟಿ (34), ಪ್ರೇಮದಾಸ (41)ಎಂದು ಗುರುತಿಸಲಾಗಿದೆ.

ಮನೆಯೊಂದರಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಈ ನಾಲ್ವರು ಕಾರ್ಮಿಕರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಕಾರ್ಮಿಕರು ಪ್ರಾಣಭಯದಿಂದ ಸ್ಥಳದಿಂದ ಓಡಿದ್ದಾರೆ. ಆದರೆ ಹೆಜ್ಜೇನು ದಾಳಿಗೊಳಗಾಗಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಮನೆಯವರು ಗಾಯಾಳುಗಳನ್ನು ಮುಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

- Advertisement -

Related news

error: Content is protected !!