- Advertisement -
- Advertisement -
ಮೂರು ಕಾರುಗಳು ಒಟ್ಟೊಟ್ಟಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಎದುರಿನ ಕಾರಿನ ಚಾಲಕ ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿದ ಕಾರಣ ಹಿಂಬದಿಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದ ಘಟನೆ ಸುಳ್ಯದ ಅಡ್ಕಾರ್ ಸಮೀಪ ನಡೆದಿದೆ. ಕಾರಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ
ಅಪಘಾತದಿಂದ ಎರಡೂ ಕಾರುಗಳು ಪಲ್ಟಿಯಾಗಿ ಜಖಂಗೊಂಡಿದೆ. ಅಪಘಾತಕ್ಕೀಡಾದ ಕಾರಲ್ಲಿ ಒಂದು ಸಂಪಾಜೆ ಚರ್ಚ್ ನ ಫಾದರ್ ಜೋಸೆಫ್ ಅವರದ್ದಾಗಿದ್ದು, ಮತ್ತೆರಡು ಕಾರುಗಳು ಕಾಸರಗೋಡು ಮೂಲದ್ದು ಎಂದು ತಿಳಿದುಬಂದಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ .
- Advertisement -