- Advertisement -
- Advertisement -
ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ ವತಿಯಿಂದ ವಿಟ್ಲ ಪಡಾರಬೆಟ್ಟುವಿನ ಬಹುಮುಖ ಪ್ರತಿಭೆ ತುಳುನಾಡಿನ ಹೆಮ್ಮೆಯ ಮನೆಮಗಳು ನಿರೀಕ್ಷಾ ಶೆಟ್ಟಿ ಇವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು.


ಮುಖ್ಯ ಅತಿಥಿಯಾಗಿ ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳು ಪುತ್ತೂರಿನ ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ ಅವರು ಸನ್ಮಾನಿಸಿ ಶುಭ ಹಾರೈಸಿದರು ಅತಿಥಿಗಳಾಗಿ ಸಮಾಜ ಸೇವಕಿ ಸೀತಾ ಭಟ್ ಪಾಣಾಜೆ ಚಲನಚಿತ್ರ ನಟ ಸಂತೋಷ್ ಜೆಪಿ ಮುರ ಗೋಪಾಲ ಶೆಟ್ಟಿ ಬಬಿತ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


ಕಾರ್ಯಕ್ರಮದ ರೂವಾರಿ ನವೀನ್ ಪುತ್ತೂರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು ಸ್ನೇಹ ಸಿಲ್ಕ್ ಅಂಡ್ ರೆಡಿಮೇಡ್ ಇದರ ಉದ್ಯೋಗಿ ಶ್ರೀ ಕೃಷ್ಣ ಯುವಕ ಮಂಡಲ ರಿ. ಸಿಟಿಗುಡ್ಡೆ ಇದರ ಅಧ್ಯಕ್ಷರಾದ ಬಿ ರಾಜೀವ ಗೌಡರವರು ಸನ್ಮಾನ ಪತ್ರವನ್ನು ಓದಿದರು ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.


- Advertisement -








