ವಿಟ್ಲ: ಆರ್ ಕೆ ಆರ್ಟ್ಸ್ ಚಿನ್ನರ ಮನೆ (ರಿ) ವಿಟ್ಲ ಇವರಿಂದ ರಾಜೇಶ್ ವಿಟ್ಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಇವರ ನಿರ್ದೇಶನದಲ್ಲಿ ಹಳೆ ವಿದ್ಯಾರ್ಥಿ ಯುವಕ ಮಂಡಲ (ರಿ) ಮಂಕುಡೆ ಕುಡ್ತಮುಗೇರು ಇವರ ಸಹಯೋಗದೊಂದಿಗೆ ಮಂಕುಡೆ ಶ್ರೀ ವಿಷ್ಣುಮೂರ್ತಿ ಭಜನಾ ಮಂದಿರದ ಕಲಾ ಮಂಟಪದಲ್ಲಿ ನೃತ್ಯ ತರಗತಿ ಹಾಗೂ ಕುಣಿತ ಭಜನೆ, ಚೆಂಡೆ ತರಗತಿಗಳು ಉದ್ಘಾಟನೆಗೊಂಡಿತು.
ವೇಣುಗೋಪಾಲ ಆಚಾರ್ಯ ಅಧ್ಯಕ್ಷರು ಮಂಕುಡೆ ಶ್ರೀ ವಿಷ್ಣುಮೂರ್ತಿ ಭಜನಾಮಂದಿರದ ಕುಡ್ತಮುಗೇರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು . ರಮೇಶ್ ಮಂಕುಡೆ ಸಂಚಾಲಕರು ಹಳೆವಿದ್ಯಾರ್ಥಿ ಯುವಕ ಮಂಡಲ (ರಿ) ಮಂಕುಡೆ ಕುಡ್ತಮುಗೇರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹರೀಶ್ ಟೈಲರ್ ಮಂಕುಡೆ ಕೊಲ್ನಾಡು ಗ್ರಾಮ ಪಂಚಾಯತ್ ಸದಸ್ಯರು, ಪದ್ಮನಾಭ ಮಂಕುಡೆ ಅಧ್ಯಕ್ಷರು ಹಳೆವಿದ್ಯಾರ್ಥಿ ಯುವಕ ಮಂಡಲ (ರಿ) ಮಂಕುಡೆ ಕುಡ್ತಮುಗೇರು ಉಪಸ್ಥಿತರಿದ್ದರು. ಸುರೇಶ್ ಪೂಜಾರಿ ಪರ್ತಿಪ್ಪಾಡಿ ಸ್ವಾಗತಿಸಿದರು. ಕೀರ್ತಿಸ್ ಪೂಜಾರಿ ಪೇರಪಡ್ಪು ಧನ್ಯವಾದಗೈದರು. ಪ್ರಶಾಂತ್ ಪೂಜಾರಿ ಪರ್ತಿಪ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.