- Advertisement -
- Advertisement -
ಇಂದು ನಾಡಿನೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ನಾಡಿನ ಮೊದಲ ಹಬ್ಬ ನಾಗರ ಪಂಚಮಿಯನ್ನು ತುಳುನಾಡಿನಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಅಂತೆಯೇ ವಿಟ್ಲದ ಹಲವು ನಾಗಬನ, ಕಟ್ಟೆ, ದೇವಸ್ಥಾನಗಳಲ್ಲಿ ನಾಗ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ವಿಟ್ಲದ ಅನಂತೇಶ್ವರ ದೇವಸ್ಥಾನದ ನಾಗಸಾನಿಧ್ಯ, ಪಂಚಲಿಂಗೇಶ್ವರ ದೇವಸ್ಥಾನದ ಬಳಿಯ ನಾಗನ ಕಟ್ಟೆ ಸೇರಿದಂತೆ ವಿವಿಧೆಡೆ ನಾಗರ ಪಂಚಮಿ ಸಂಭ್ರಮ ಕಳೆಗಟ್ಟಿತ್ತು. ಸಾವಿರಾರು ಭಕ್ತಾದಿಗಳು ದೇವಸ್ಥಾನ, ಕಟ್ಟೆಗಳಿಗೆ ಆಗಮಿಸಿ ನಾಗದೇವರಿಗೆ ತನಿ ಎರೆದು ನಾಗದೇವರ ಕೃಪೆಗೆ ಪಾತ್ರರಾದರು.
- Advertisement -