Wednesday, April 24, 2024
spot_imgspot_img
spot_imgspot_img

ವಿಟ್ಲ(ಮಾ.1-ಮಾ.2): ಮಹಾ ಶಿವರಾತ್ರಿ ಪ್ರಯುಕ್ತ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಲಕ್ಷ ಬಿಲ್ವಾರ್ಚನೆ, ಏಕಾದಶ ರುದ್ರಾಭಿಷೇಕ, ರಂಗಪೂಜೆ ಹಾಗೂ ದೇವರ ಬಲಿ ಉತ್ಸವ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಲಕ್ಷ ಬಿಲ್ವಾರ್ಚನೆ, ಏಕಾದಶ ರುದ್ರಾಭಿಷೇಕ, ರಂಗಪೂಜೆ ಹಾಗೂ ದೇವರ ಬಲಿ ಉತ್ಸವವು ಫೆ.1 ಮಂಗಳವಾರದಂದು ಜರಗಲಿದೆ.

ಸಂಜೆ 6:30 ರಿಂದ 9:30 ರವರೆಗೆ ಹಿಂದೂ ಯುವ ಸೇನೆ ವಿಟ್ಲ ಅರ್ಪಿಸುವ ‘ಯಕ್ಷಗಾನ ಹಾಸ್ಯ ನಾಟ್ಯ ವೈಭವ’ ನಡೆಯಲಿದೆ.

vtv vitla
vtv vitla

ರಾತ್ರಿ 12ರ ಬಳಿಕ ವಿವಿಧ ಭಜನಾ ಮಂಡಳಿಯವರಿಂದ ಭಜನೋತ್ಸವ ನಡೆಯಲಿದೆ. ಫೆ.2 ಬುಧವಾರ ಪ್ರಾತಃಕಾಲ 5ಕ್ಕೆ ದೇವರ ಉತ್ಸವ ಬಲಿ, ಕಟ್ಟೆ ಪೂಜೆ, ಬಟ್ಟಲು ಕಾಣಿಕೆ ಜರಗಲಿರುವುದು.

ಭಗವದ್ಭಕ್ತರಾದ ತಾವೆಲ್ಲರೂ ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!