- Advertisement -
- Advertisement -
ವಿಟ್ಲ 14 ವರ್ಷದ ಬಾಲಕಿಯು ತಲೆಯ ನರದ ತೊಂದರೆಯಿಂದ ಬಳಲುತ್ತಿದ್ದಾಳೆ. ಆರ್ಥಿಕವಾಗಿ ಹಿಂದುಳಿದಿದ್ದು ದಾನಿಗಳು ತಮ್ಮಿಂದ ಆದಷ್ಟು ಸಹಾಯ ಮಾಡುತ್ತಿದ್ದಾರೆ. ವಿಟ್ಲದ ಖಾಸಗಿ ಐಟಿಐ ವಿದ್ಯಾರ್ಥಿಗಳು ವಿಟ್ಲ ಪೇಟೆಯಲ್ಲಿ ಧನಸಂಗ್ರಹಿಸಿ ಬಾಲಕಿಯ ಚಿಕಿತ್ಸೆ ಆರ್ಥಿಕ ನೆರವು ಕಲ್ಪಿಸಿದ್ದಾರೆ.
ವಿಟ್ಲ ಮುಡ್ನೂರು ಗ್ರಾಮದ ಬಂಟ್ವಾಳ ತಾಲೂಕಿನ ಕಂಬಳ ಬೆಟ್ಟು ನಿವಾಸಿ ದಿವಂಗತ ವನರಾಜ ಹಾಗೂ ಲೀಲಾವತಿ ದಂಪತಿಯ ಪುತ್ರಿ ವರ್ಷಿನಿ. ಈಕೆಯ ಚಿಕಿತ್ಸೆಗೆ ಖಾಸಗಿ ಐಟಿಐ ವಿದ್ಯಾರ್ಥಿಗಳು ನೆರವಾಗಿದ್ದಾರೆ. ವಿಟ್ಲ ಪೇಟೆಯಲ್ಲಿ ಧನ ಸಂಗ್ರಹಿಸಿದ್ದಾರೆ. ಸುಮಾರು ₹20,320 ಸಂಗ್ರಹವಾದ ಮೊತ್ತ. ಇದನ್ನು ಬಾಲಕಿಗೆ ಹಸ್ತಾಂತರಿಸಿದ್ದಾರೆ.
- Advertisement -