ವಿಟ್ಲ: ನಾಪತ್ತೆಯಾದ ಯುವತಿಯರೆಂದು ತಿಳಿದು ಮನೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ಅಮಾಯಕ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮನಬಂದಂತೆ ಥಳಿಸಿದ ಘಟನೆಗೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಮುಸ್ಲಿಮರ ಗುಂಪೊಂದು ವಿಟ್ಲದ ಅಡ್ಡದ ಬೀದಿಯಲ್ಲಿ ಯುವತಿಯರ ಮೈಮೇಲೆ ಸಾರ್ವಜನಿಕವಾಗಿ ಅಸಭ್ಯವಾಗಿ ಕೈಹಾಕಿ ನಿಂದಿಸುತ್ತಾ ಮನಬಂದಂತೆ ಥಳಿಸಿ ರಾಕ್ಷಸೀ ಕೃತ್ಯ ಎಸಗಿದ್ದಾರೆ. ಇಂತಹ ರಾಕ್ಷಸಿ ಕೃತ್ಯ ರಾಜಿ ಮಾತುಕಥೆಯಲ್ಲಿ ಮುಕ್ತಾಯವಾಗಿದೆ. ಆದರೆ ಇಂತಹ ಪುಂಡ ಪೋಕಿರಿಗಳನ್ನು ಸುಮ್ಮನೆ ಬಿಡಬಾರದು. ಹೆಣ್ಣು ಮಕ್ಕಳಿಗೆ ಥಳಿಸಿದವರು ಮುಂದೆ ಎಂತಹ ನೀಚ ಕೆಲಸಕ್ಕೂ ಕೈ ಹಾಕಲು ಹಿಂದು-ಮುಂದು ನೋಡಲ್ಲ. ಪೊಲೀಸರು ಹಲ್ಲೆಗೈದವರ ಮೇಲೆ ಸುಮೊಟೋ ಕೇಸು ದಾಖಲಿಸಿ ಬಂಧಿಸಬೇಕೆಂಬ ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಘಟನೆಯ ವಿವರ:
ಕಾಡುಮಠದ ಬಾಡಿಗೆ ಮನೆ ನಿವಾಸಿ ಕುಳಾಲು ಆಟೋ ಚಾಲಕನ ಅಪ್ರಾಪ್ತ ಪುತ್ರಿ ಸೋಮವಾರ ಬೆಳಗ್ಗಿನಿಂದ ನಿಗೂಢ ನಾಪತ್ತೆಯಾಗಿದ್ದಳು. ಸಂಜೆ ತನ್ನ ಕಾಸರಗೋಡಿನ ಸ್ನೇಹಿತೆ ಜೊತೆ ಮನೆಗೆ ಹಿಂದಿರುಗಿದಾಗ ಹೆತ್ತವರ ಕಿರಿಕಿರಿ, ನಿಂದನೆಗೆ ಬೆದರಿದ ಯುವತಿಯರಿಬ್ಬರು ಮತ್ತೆ ಆಟೋ ಹತ್ತಿ ವಿಟ್ಲದತ್ತ ತೆರಳಿದ್ದರು.
ಈ ಸುದ್ದಿ ಬಯಲಾಗುತ್ತಿದ್ದಂತೆ ಕರೈ, ಕಾಡುಮಠ, ಸಾಲೆತ್ತೂರು ಪರಿಸರದ ಐವತ್ತಕ್ಕೂ ಹೆಚ್ಚು ಮುಸ್ಲಿಂ ಯುವಕರು ವಿಟ್ಲದಲ್ಲಿ ಸುತ್ತಾಡುತ್ತಾ ನಾಪತ್ತೆಯಾದ ಯುವತಿಯರ ಶೋಧ ನಡೆಸಿದ್ದಾರೆ. ಇದೇ ಸಮಯ ವಿಟ್ಲದಲ್ಲಿ ಬೈರಿಕಟ್ಟೆಯ ಅಬ್ದುಲ್ಲಾ ಅವರ ಇಬ್ಬರು ಅಪ್ರಾಪ್ತ ಪುತ್ರಿಯರು ತಮ್ಮ ಮನೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದರೆನ್ನಲಾಗಿದೆ. ಇದೇ ಯುವತಿಯರು ನಾಪತ್ತೆಯಾದವರು ಎಂಬ ಅನುಮಾನಗೊಂಡ ಯುವಕರ ತಂಡ ಹಿಂದು ಮುಂದು ವಿಚಾರಿಸದೇ ಏಕಾಏಕಿ ಯುವತಿಯರ ಮೈಮೇಲೆ ಸಾರ್ವಜನಿಕವಾಗಿ ಅಸಭ್ಯವಾಗಿ ಕೈಹಾಕಿ ನಿಂದಿಸುತ್ತಾ ಮನಬಂದಂತೆ ಥಳಿಸಿ ರಾಕ್ಷಸೀ ಕೃತ್ಯ ಎಸಗಿದ್ದಾರೆ.
ಸುಮೋಟೋ ಕೇಸು ದಾಖಲಿಸಿ; ಸಾರ್ವಜನಿಕ ವಲಯದಿಂದ ಆಕ್ರೋಶ
ಹೆಣ್ಣು ಮಕ್ಕಳನ್ನು ಈ ರೀತಿ ನಡೆಸಿಕೊಂಡವರು ಮುಂದೆ ಯಾವ ನೀಚ ಕೆಲಸಕ್ಕೂ ಕೈ ಹಾಕದೆ ಬಿಡುವವರು ಅಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕು. ಈಗ ಈ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಮಾಡಿದರೆ ಮುಂದೆ ಬಾಲ ಬಿಚ್ಚದೆ ಬಿಡುವುದಿಲ್ಲ. ರಾಕ್ಷಸಿ ಕೃತ್ಯ ಎಸಗಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸುಮೊಟೋ ಕೇಸು ದಾಖಲಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.