Thursday, May 2, 2024
spot_imgspot_img
spot_imgspot_img

ವಿಟ್ಲ: ಇಡ್ಕಿದು ನಿವಾಸಿ ಭಾಸ್ಕರ್‌ ಅನುಮಾನಾಸ್ಪದ ಸಾವು; ಪೂರ್ಲಿಪ್ಪಾಡಿ ನಿವಾಸಿ ಯೋಗೀಶ್‌ ಪೊಲೀಸ್‌ ವಶಕ್ಕೆ..!

- Advertisement -G L Acharya panikkar
- Advertisement -
vtv vitla

ವಿಟ್ಲ: ಇಡ್ಕಿದು ಗ್ರಾಮದ ಕುಮೇರು ನಿವಾಸಿ ಭಾಸ್ಕರ್‌ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ಲಿಪ್ಪಾಡಿ ನಿವಾಸಿ ಯೋಗೀಶ್‌ ಎಂಬಾತನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ನಿನ್ನೆ ರಾತ್ರಿ ಮಲಗಿದ್ದ ಭಾಸ್ಕರ್‌ ಅವರು ಬೆಳಗ್ಗೆ ಏಳದೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಪೂರ್ಲಿಪ್ಪಾಡಿ ನಿವಾಸಿ ಯೋಗೀಶ್‌ ಎಂಬಾತನೊಂದಿಗೆ ಮೃತ ಭಾಸ್ಕರ್‌ ಅವರಿಗೆ ಹಣದ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿದ್ದು, ಈತ ಆಗಾಗ ಭಾಸ್ಕರನ ಮನೆಗೆ ಬಂದು ಹೋಗುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದರು. ಈತ ಈ ಹಿಂದೆಯೂ ಎರಡು ಸಂಸಾರಗಳ ಜೊತೆ ಆಟವಾಡಿ ಸಿಕ್ಕಿ ಬಿದ್ದು ಪೊಲೀಸರು ಬೆಂಡೆತ್ತಿದ್ದಾರೆ. ವಿಷಯ ತಿಳಿದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗೀಶ್‌ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಭಾಸ್ಕರ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರು ದೇರಳಕಟ್ಟೆ ಆಸ್ಪತ್ರೆಗೆ ಕೊಂಡ್ಯೊಯ್ದಿದ್ದಾರೆ. ಮೃತ ಭಾಸ್ಕರ್‌ ಅವರ ಪತ್ನಿ ಆಶಾ ಅವರನ್ನು ಪೊಲೀಸರು ಈಗಾಗಲೇ ತನಿಖೆ ನಡೆಸಿದ್ದು, ಹೆಚ್ಚಿನ ವಿಚಾರಣೆಗಾಗಿ ಯೋಗೀಶ್‌ ನನ್ನು ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!