Friday, May 17, 2024
spot_imgspot_img
spot_imgspot_img

ವಿಟ್ಲ: ಎಸ್.ಎಲ್.ವಿ ಗ್ರೂಪ್ಸ್ ಮಾಲಕ ದಿವಾಕರ್ ದಾಸ್ ನೆರ್ಲಾಜೆ ಅವರಿಂದ ಲಯನ್ಸ್ ಜಿಲ್ಲಾ 317ಡಿ ಪ್ರಾಂತೀಯ 7ರ “ಆದಿತ್ಯ” ಇದರ ಲೋಗೋ ಬಿಡುಗಡೆ

- Advertisement -G L Acharya panikkar
- Advertisement -

ವಿಟ್ಲ: ಲಯನ್ಸ್ ಜಿಲ್ಲಾ 317ಡಿ ಪ್ರಾಂತೀಯ 7ರ “ಆದಿತ್ಯ” ಇದರ ಲೋಗೋ ಬಿಡುಗಡೆಯು 18-10-2022ರಂದು ವಿಟ್ಲ ಪ್ರಾಂತೀಯದಲ್ಲಿ ನಡೆಯಿತು.

ಲೋಗೋ ಬಿಡುಗಡೆಯನ್ನು ಎಸ್.ಎಲ್.ವಿ ಗ್ರೂಪ್ಸ್ ಮಾಲಕ ದಿವಾಕರ್ ದಾಸ್ ನೆರ್ಲಾಜೆ ನೆರವೇರಿಸಿದ್ದು, ಈ ಸಂದರ್ಭದಲ್ಲಿ ಲಯನ್ಸ್ ಇದರ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್, ಲಯನ್ಸ್ ವಿಟ್ಲ ಸಿಟಿ ಇದರ ಕಾರ್ಯದರ್ಶಿ ಹರೀಶ್ ಶೆಟ್ಟಿ, ವಿಟ್ಲ ಸಿಟಿ ಇದರ ಸಕ್ರಿಯ ಸದಸ್ಯರಾದ ಸದಾನಂದ ಗೌಡ ಸೇರಾಜೆ, ವಸಂತ ಶೆಟ್ಟಿ ಎರ್ಮೆನಿಲೆ, ಕೃಷ್ಣಪ್ಪ ಗೌಡ, ಜಯರಾಮ್ ಬಲ್ಲಾಳ್, ಮೋಹನ್ ಕಟ್ಟೆ ಮತ್ತು ಸುರೇಶ್ ದಾಸ್ ನೆರ್ಲಾಜೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ನವೆಂಬರ್ 20ರಂದು ನಡೆಯಲಿರುವ ಲಯನ್ಸ್ ಜಿಲ್ಲಾ ಪ್ರಾಂತೀಯ ಸಮ್ಮೇಳನಕ್ಕೆ ಪ್ರಧಾನ ಪ್ರಯೋಜಕರಾಗಿ ಆಗಮಿಸಲಿರುವ ಎಸ್.ಎಲ್.ವಿ ಗ್ರೂಪ್ಸ್ ಮಾಲಕ ದಿವಾಕರ್ ದಾಸ್ ನೆರ್ಲಾಜೆ ಅವರಿಗೆ ಆಹ್ವಾನ ನೀಡಿದ್ದು, ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ದಿವಾಕರ್ ದಾಸ್ ನೆರ್ಲಾಜೆ ಭರವಸೆ ನೀಡಿದರು. ಲೋಗೋ ಬಿಡುಗಡೆಯು ದಿವಾಕರ್ ದಾಸ್ ನೆರ್ಲಾಜೆಯವರ ನಿವಾಸದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಪ್ರಾಂತೀಯ ಅಧ್ಯಕ್ಷರ ಸಮ್ಮುಖದಲ್ಲಿ ಗೌರವರ್ಪಣೆ ಮಾಡಿದರು.

- Advertisement -

Related news

error: Content is protected !!