- Advertisement -
- Advertisement -
ವಿಟ್ಲ: ಧರ್ಮಶ್ರೀ ನವೋದಯ ಸ್ವ-ಸಹಾಯ ಗುಂಪು ಕಾರ್ಯಾಡಿ -ಕುಳ ಇದರ ಗೃಹೋದ್ಯಮ ಜನಪ್ರಸಿದ್ದ ಉತ್ಪನ್ನಗಳ ಸಂಸ್ಕರಣಾ ಕೇಂದ್ರ ಕಾರ್ಯಾಡಿಯಲ್ಲಿ ಶುಭಾರಂಭಗೊಂಡಿತು.
ಬೆಳಗ್ಗೆ ಗಣಹೋಮ ನೆರವೇರಿಸಿ, ಬಳಿಕ ಸಂಸ್ಥೆಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸುಧಾಕರ ಶೆಟ್ಟಿ ಬೀಡಿನಮಜಲು ಅಧ್ಯಕ್ಷರು ಇಡ್ಕಿದು ಸೇವಾ ಸಹಕಾರಿ ಸಂಘ, ಈಶ್ವರ ನಾಯ್ಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಡ್ಕಿದು ಸೇವಾ ಸಹಕಾರಿ ಸಂಘ, ವಸಂತ ಕುಮಾರ್ ಅಮೈ, ಪ್ರವೀಣ ಸರಳಾಯ ಪುಣಚ. ರಾ ಸ್ವ ಸೇ ಸಂಘದ ಪ್ರಾಂತ ಗೋ ಸೇವಾ ಸಂಯೋಜಕ್, ನಾರಾಯಣ ಪೂಜಾರಿ, ವೇಣುಗೋಪಾಲ್ ಶೆಟ್ಟಿ ಮರುವಾಳ, ಇಂಜಿನಿಯರ್ ಸುಬ್ರಹ್ಮಣ್ಯ ಭಟ್, ಉಪಸ್ಥಿತರಿದ್ದು ಸಂಸ್ಥೆಗೆ ಶುಭಹಾರೈಸಿದರು.
ಜನಾರ್ಧನ ಪೂಜಾರಿ ಕಾರ್ಯಾಡಿ ಮಾಲಕತ್ವದ ಈ ಸಂಸ್ಥೆಯಲ್ಲಿ ವ್ಯಾಪಾರಸ್ಥರಿಗೆ ಹೋಲ್ಸೇಲ್ ದರದಲ್ಲಿ ಮನೆಯಲ್ಲೇ ತಯಾರಿಸಿದ ಫಸ್ಟ್ ಕ್ವಾಲಿಟಿ ಹುಣಸೆ ಹಣ್ಣು ಮತ್ತು ಬೇಕರಿ ಐಟಂಗಳು ದೊರೆಯುತ್ತದೆ, ಆರೋಗ್ಯ ಸ್ನೇಹಿ ಮತ್ತು ಉತ್ತಮ ಗುಣಮಟ್ಟದ ರುಚಿಕರ ಬೇಕರಿ ತಿಂಡಿ ತಿನಿಸುಗಳು ಲಭ್ಯ.
- Advertisement -